‘ಭಿಕ್ಷಾಟನೆಯು ಬೇಡ ಜಂಗಮ ಜನಾಂಗದ ಮೂಲ ಕಸುಬು. ಪೂರ್ವಿಕರು ಜಂಗಮ ವೇಷ ಧರಿಸಿ ಊರೂರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜನಾಂಗವು ಅಭಿವೃದ್ಧಿ ಹೊಂದುತ್ತಿರುವ ಕಾರಣ ಮೂಲ ಕಸುಬು ಮರೆಯಾಗುತ್ತಿದೆ. ಜನಾಂಗದ ಮಕ್ಕಳಿಗೆ ನಾವು ನಡೆದು ಬಂದ ಹಾದಿ ಬಗ್ಗೆ ಮನವರಿಕೆ ಮಾಡಲು ಪ್ರತಿವರ್ಷ ಸಂಕ್ರಾತಿ ಹಬ್ಬದಂದು ಸಾಂಪ್ರದಾಯಕ ಭಿಕ್ಷಾಟನೆ ನಡೆಸಲಾಗುತ್ತಿದೆ’ ಎಂದು ಜನಾಂಗದ ಹಿರಿಯರು ತಿಳಿಸಿದರು.