‘ಹೆಲಿಕಾಪ್ಟರ್ ಹಾರಾಟ ಆರಂಭಿಸಿ ಒಂದಷ್ಟು ದೂರ ಸಾಗಿತ್ತು. ಕೆಳಗೆ ಇಳಿಯಲು ಮೈಸೂರಿನಲ್ಲಿ ವಾತಾವರಣ ಪೂರಕವಾಗಿಲ್ಲ ಎಂಬ ಮಾಹಿತಿ ಪೈಲೆಟ್ಗೆ ಸಿಕ್ಕಿತು. ಹೀಗಾಗಿ, ಹೆಲಿಕಾಪ್ಟರ್ ಚಿತ್ರದುರ್ಗಕ್ಕೆ ಮರಳಿತು. ಸಿದ್ದರಾಮಯ್ಯ ಅವರು ಕಾಫಿ ಸೇವಿಸಿ ರಸ್ತೆ ಮೂಲಕ ಪ್ರಯಾಣ ಬೆಳೆಸಿದರು. ಹೆಲಿಕಾಪ್ಟರ್ ಸೋಮವಾರ ಬೆಳಿಗ್ಗೆ ತೆರಳಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.