<p>ಸಿರಿಗೆರೆ: ‘ಒಳಮೀಸಲಾತಿಯ ಅನುಕೂಲ ಪಡೆದುಕೊಳ್ಳಲು ಜಾತಿ ಗಣತಿಯ ಸಂದರ್ಭದಲ್ಲಿ ಸಮುದಾಯದವರು ಮಾದಿಗ ಎಂದೇ ಬರೆಸಬೇಕು’ ಎಂದು ಕೆಪಿಸಿಸಿ ಎಸ್ಸಿ ಸೆಲ್ ಜಿಲ್ಲಾ ಘಟಕದ ಉಪಾಧ್ಯಕ್ಷ ಸೀಗೇಹಳ್ಳಿ ರಾಜು ಮನವಿ ಮಾಡಿದ್ದಾರೆ.</p>.<p>‘ಒಳಮೀಸಲಾತಿಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಈ ಹಿಂದಿನ ಎಲ್ಲ ಲೋಪಗಳನ್ನೂ ಮರೆತು ಮಾದಿಗ ಎಂದೇ ಬರೆಯಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದರು.</p>.<p>‘ಒಳಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಲು ನಿಖರ ಅಂಕಿ– ಅಂಶ ನೀಡುವಂತೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರನ್ನು ರಾಜ್ಯ ಸರ್ಕಾರ ಕೋರಿದೆ. ಈ ನಿಟ್ಟಿನಲ್ಲಿ ಸರ್ಕಾರದ ಪರವಾಗಿ ನೌಕರರು ಎಲ್ಲ ಗ್ರಾಮ, ಪಟ್ಟಣ, ನಗರಗಳಿಗೆ ಭೇಟಿ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ‘ಮಾದಿಗ’ ಯುವಕರು, ನಿವೃತ್ತ ನೌಕರರು, ವಿದ್ಯಾವಂತರು ತಮ್ಮ ತಮ್ಮ ಕಾಲೊನಿಗಳ ನಿವಾಸಿಗಳಿಗೆ ‘ಮಾದಿಗ’ ಎಂದು ನಮೂದಿಸುವಂತೆ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.</p>.<p>‘ಅಧಿಕಾರಿಗಳು ಅರ್ಜಿಗಳನ್ನು ತುಂಬುವಾಗ ಪೆನ್ಸಿಲ್ ಬಳಸದೆ ಪೆನ್ನಿಂದ ಭರ್ತಿ ಮಾಡುವಂತೆಯೂ ತಾಕೀತು ಮಾಡಬೇಕು’ ಎಂದು ರಾಜು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿರಿಗೆರೆ: ‘ಒಳಮೀಸಲಾತಿಯ ಅನುಕೂಲ ಪಡೆದುಕೊಳ್ಳಲು ಜಾತಿ ಗಣತಿಯ ಸಂದರ್ಭದಲ್ಲಿ ಸಮುದಾಯದವರು ಮಾದಿಗ ಎಂದೇ ಬರೆಸಬೇಕು’ ಎಂದು ಕೆಪಿಸಿಸಿ ಎಸ್ಸಿ ಸೆಲ್ ಜಿಲ್ಲಾ ಘಟಕದ ಉಪಾಧ್ಯಕ್ಷ ಸೀಗೇಹಳ್ಳಿ ರಾಜು ಮನವಿ ಮಾಡಿದ್ದಾರೆ.</p>.<p>‘ಒಳಮೀಸಲಾತಿಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಈ ಹಿಂದಿನ ಎಲ್ಲ ಲೋಪಗಳನ್ನೂ ಮರೆತು ಮಾದಿಗ ಎಂದೇ ಬರೆಯಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದರು.</p>.<p>‘ಒಳಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಲು ನಿಖರ ಅಂಕಿ– ಅಂಶ ನೀಡುವಂತೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರನ್ನು ರಾಜ್ಯ ಸರ್ಕಾರ ಕೋರಿದೆ. ಈ ನಿಟ್ಟಿನಲ್ಲಿ ಸರ್ಕಾರದ ಪರವಾಗಿ ನೌಕರರು ಎಲ್ಲ ಗ್ರಾಮ, ಪಟ್ಟಣ, ನಗರಗಳಿಗೆ ಭೇಟಿ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ‘ಮಾದಿಗ’ ಯುವಕರು, ನಿವೃತ್ತ ನೌಕರರು, ವಿದ್ಯಾವಂತರು ತಮ್ಮ ತಮ್ಮ ಕಾಲೊನಿಗಳ ನಿವಾಸಿಗಳಿಗೆ ‘ಮಾದಿಗ’ ಎಂದು ನಮೂದಿಸುವಂತೆ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.</p>.<p>‘ಅಧಿಕಾರಿಗಳು ಅರ್ಜಿಗಳನ್ನು ತುಂಬುವಾಗ ಪೆನ್ಸಿಲ್ ಬಳಸದೆ ಪೆನ್ನಿಂದ ಭರ್ತಿ ಮಾಡುವಂತೆಯೂ ತಾಕೀತು ಮಾಡಬೇಕು’ ಎಂದು ರಾಜು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>