<p>ಸಿರಿಗೆರೆ: ಮಧ್ಯ ಕರ್ನಾಟಕದ ಭಕ್ತರ ಆರಾಧ್ಯ ದೈವ ಶಿವನಾರದಮುನಿ ನೂತನ ದೇವಾಲಯ ನಿರ್ಮಾಣಕ್ಕೆ ಜನವರಿ 19ರಂದು ಬೆಳಿಗ್ಗೆ 10 ಗಂಟೆಗೆ ಶಿಲಾನ್ಯಾಸ ನಡೆಯಲಿದೆ. ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. </p>.<p>ಸಿರಿಗೆರೆಯ ಪ್ರವೇಶದ್ವಾರದಲ್ಲಿಯೇ ದಶಕಗಳ ಹಿಂದೆ ನಿರ್ಮಾಣವಾಗಿದ್ದ ದೇವಾಲಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಸಮುದಾಯ ಭವನವನ್ನು ಈಗಾಗಲೇ ತೆರವುಗೊಳಿಸಲಾಗಿದೆ. ದೇವತಾಮೂರ್ತಿಯನ್ನು ತಾತ್ಕಾಲಿಕವಾಗಿ ಕೃಷಿ ಸಹಕಾರ ಸಂಘದದ ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. </p>.<p>ಚೌಳರ ಕಾಲದ ವಾಸ್ತುಶಿಲ್ಪವನ್ನು ಆಧರಿಸಿ ದೇವಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಲ್ಲುಗಳನ್ನೇ ಬಳಸಿ ಆಕರ್ಷಕವಾಗಿ ದೇವಾಲಯ ನಿರ್ಮಾಣ ಮಾಡುವ ಉದ್ದೇಶ ಇದೆ. ನೂತನ ದೇವಾಲಯದಲ್ಲಿ 3 ಮುಖಮಂಟಪಗಳು, ಮಹಾಮಂಟಪ, ಗರ್ಭಗುಡಿ, ಗರ್ಭಗುಡಿಯ ಸುತ್ತ ಪ್ರಾಂಗಣ, ದೇವಾಲಯದ ಸುತ್ತ 10 ಅಡಿಯ ಪ್ರಾಂಗಣ ಇರುತ್ತದೆ. </p>.<p>ದೇವಾಲಯದ ಗರ್ಭಗುಡಿಯ ಮೇಲೆ ಗೋಪುರ ಇರುವಂತೆಯೇ ಮುಂಟಪಗಳ ಮೇಲೆಯೂ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು. ದೇವಾಲಯದ ಸನಿಹವೇ ದೀಪಸ್ತಂಭವೂ ಇರಲಿದೆ. ದೇವಾಲಯದ ನಿರ್ಮಾಣ ವೆಚ್ಚ ₹5.50 ಕೋಟಿ ಎಂದು ನಿರ್ಧರಿಸಲಾಗಿದೆ. ಬೇರೆ ಬೇರೆ ಭಾಗದಲ್ಲಿ ನೆಲೆಸಿರುವ ಭಕ್ತರು ಈಗಾಗಲೇ ಮುಕ್ತವಾಗಿ ನಿರ್ಮಾಣಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ’ ಎಂದು ಸಿ.ಆರ್. ನಾಗರಾಜ್ ತಿಳಿಸಿದರು.</p>.<p>ದೊಡ್ಡಬಳ್ಳಾಪುರ ಸಮೀಪದ ಕೊಯಿರಾ ಹಾಗೂ ಶಿರಾ ಸಮೀಪದ ಮದ್ದನಾಯಕನಹಳ್ಳಿ ಶಿಲ್ಪಗಳನ್ನು ನಿರ್ಮಾಣಕ್ಕೆ ಬಳಸಲಾಗುವುದು. ರಾಜ್ಯದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿರುವ ಕಾರ್ಕಳ ಮೂಲದ ನಾಗರಾಜಚಾರಿ ತಂಡದವರು ನಿರ್ಮಾಣದ ಹೊಣೆ ಹೊತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿರಿಗೆರೆ: ಮಧ್ಯ ಕರ್ನಾಟಕದ ಭಕ್ತರ ಆರಾಧ್ಯ ದೈವ ಶಿವನಾರದಮುನಿ ನೂತನ ದೇವಾಲಯ ನಿರ್ಮಾಣಕ್ಕೆ ಜನವರಿ 19ರಂದು ಬೆಳಿಗ್ಗೆ 10 ಗಂಟೆಗೆ ಶಿಲಾನ್ಯಾಸ ನಡೆಯಲಿದೆ. ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. </p>.<p>ಸಿರಿಗೆರೆಯ ಪ್ರವೇಶದ್ವಾರದಲ್ಲಿಯೇ ದಶಕಗಳ ಹಿಂದೆ ನಿರ್ಮಾಣವಾಗಿದ್ದ ದೇವಾಲಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಸಮುದಾಯ ಭವನವನ್ನು ಈಗಾಗಲೇ ತೆರವುಗೊಳಿಸಲಾಗಿದೆ. ದೇವತಾಮೂರ್ತಿಯನ್ನು ತಾತ್ಕಾಲಿಕವಾಗಿ ಕೃಷಿ ಸಹಕಾರ ಸಂಘದದ ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. </p>.<p>ಚೌಳರ ಕಾಲದ ವಾಸ್ತುಶಿಲ್ಪವನ್ನು ಆಧರಿಸಿ ದೇವಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಲ್ಲುಗಳನ್ನೇ ಬಳಸಿ ಆಕರ್ಷಕವಾಗಿ ದೇವಾಲಯ ನಿರ್ಮಾಣ ಮಾಡುವ ಉದ್ದೇಶ ಇದೆ. ನೂತನ ದೇವಾಲಯದಲ್ಲಿ 3 ಮುಖಮಂಟಪಗಳು, ಮಹಾಮಂಟಪ, ಗರ್ಭಗುಡಿ, ಗರ್ಭಗುಡಿಯ ಸುತ್ತ ಪ್ರಾಂಗಣ, ದೇವಾಲಯದ ಸುತ್ತ 10 ಅಡಿಯ ಪ್ರಾಂಗಣ ಇರುತ್ತದೆ. </p>.<p>ದೇವಾಲಯದ ಗರ್ಭಗುಡಿಯ ಮೇಲೆ ಗೋಪುರ ಇರುವಂತೆಯೇ ಮುಂಟಪಗಳ ಮೇಲೆಯೂ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು. ದೇವಾಲಯದ ಸನಿಹವೇ ದೀಪಸ್ತಂಭವೂ ಇರಲಿದೆ. ದೇವಾಲಯದ ನಿರ್ಮಾಣ ವೆಚ್ಚ ₹5.50 ಕೋಟಿ ಎಂದು ನಿರ್ಧರಿಸಲಾಗಿದೆ. ಬೇರೆ ಬೇರೆ ಭಾಗದಲ್ಲಿ ನೆಲೆಸಿರುವ ಭಕ್ತರು ಈಗಾಗಲೇ ಮುಕ್ತವಾಗಿ ನಿರ್ಮಾಣಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ’ ಎಂದು ಸಿ.ಆರ್. ನಾಗರಾಜ್ ತಿಳಿಸಿದರು.</p>.<p>ದೊಡ್ಡಬಳ್ಳಾಪುರ ಸಮೀಪದ ಕೊಯಿರಾ ಹಾಗೂ ಶಿರಾ ಸಮೀಪದ ಮದ್ದನಾಯಕನಹಳ್ಳಿ ಶಿಲ್ಪಗಳನ್ನು ನಿರ್ಮಾಣಕ್ಕೆ ಬಳಸಲಾಗುವುದು. ರಾಜ್ಯದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿರುವ ಕಾರ್ಕಳ ಮೂಲದ ನಾಗರಾಜಚಾರಿ ತಂಡದವರು ನಿರ್ಮಾಣದ ಹೊಣೆ ಹೊತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>