‘ಅನೇಕ ಕೈಮಗ್ಗ ಮಾಲೀಕರು ರಾಜ್ಯ, ರಾಷ್ಟ್ರಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಾರ್ಮಿಕರು ನೇಯ್ದ ಸೀರೆಯಿಂದ ಅವರಲ್ಲಿ ಅನೇಕರು ಪ್ರಶಸ್ತಿ ಪಡೆದಿರುತ್ತಾರೆ. ಆದರೆ, ಕಾರ್ಮಿಕರಿಗೆ ಯಾವುದೇ ಸನ್ಮಾನ, ಗೌರವ ಸಿಗುವುದಿಲ್ಲ. ಆದ್ದರಿಂದ ಕಾರ್ಮಿಕರನ್ನು ಸನ್ಮಾನಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಮಿಕರು ತುಂಬಾ ಖುಷಿಯಾಗಿದ್ದಾರೆ’ ಎಂದು ಮಂಚಿ ಮಾರುತಿ ‘ಪ್ರಜಾವಾಣಿ‘ಗೆ ತಿಳಿಸಿದರು.