<p><strong>ಹೊಸದುರ್ಗ:</strong> ಸರ್ಕಾರ ಟೀಕಿಸುವ ಬರಹವನ್ನು ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ತಾಲ್ಲೂಕಿನ ಕಾನುಬೇನಹಳ್ಳಿ ಶಿಕ್ಷಕ ಶಾಂತಮೂರ್ತಿ ಎಂ.ಜಿ. ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಅಮಾನತು ಮಾಡಿದ್ದಾರೆ.</p>.<p>ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಶಾಂತಮೂರ್ತಿ ಅವರು, ‘ಎಸ್.ಎಂ. ಕೃಷ್ಣ ಅವಧಿಯಲ್ಲಿ ₹ 3,590 ಕೋಟಿ, ಧರ್ಮಸಿಂಗ್ ₹ 15,635 ಕೋಟಿ, ಎಚ್.ಡಿ. ಕುಮಾರಸ್ವಾಮಿ ₹ 3,545 ಕೋಟಿ, ಬಿ.ಎಸ್. ಯಡಿಯೂರಪ್ಪ ₹ 25,653 ಕೋಟಿ, ಸದಾನಂದಗೌಡ ₹ 9,464 ಕೋಟಿ, ಜಗದೀಶ ಶೆಟ್ಟರ್ ₹ 13,464 ಕೋಟಿ, ಸಿದ್ದರಾಮಯ್ಯ ₹ 2,42,000 ಕೋಟಿ ಸಾಲ ಮಾಡಿದರು.</p>.<p>ಎಸ್.ಎಂ. ಕೃಷ್ಣ ಅವಧಿಯಿಂದ ಶೆಟ್ಟರ್ವರೆಗೆ ಮಾಡಿದ ಒಟ್ಟು ಸಾಲ ₹ 71,331 ಕೋಟಿ, ಸಿದ್ದರಾಮಯ್ಯ ಅವರು ಮಾಡಿದ ಸಾಲ ₹ 2,42,000 ಕೋಟಿ. ಹೀಗಿರುವಾಗ ಬಿಟ್ಟಿ ಭಾಗ್ಯ ಕೊಡದೆ ಇನ್ನೇನು’ ಎಂದು ಬರಹದಲ್ಲಿ ಟೀಕಿಸಿದ್ದರು. ಈ ಮಾಹಿತಿಯನ್ನು ವಾಟ್ಸ್ಆ್ಯಪ್ ಗ್ರೂಪ್ಗಳಿಗೂ ಶೇರ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ:</strong> ಸರ್ಕಾರ ಟೀಕಿಸುವ ಬರಹವನ್ನು ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ತಾಲ್ಲೂಕಿನ ಕಾನುಬೇನಹಳ್ಳಿ ಶಿಕ್ಷಕ ಶಾಂತಮೂರ್ತಿ ಎಂ.ಜಿ. ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಅಮಾನತು ಮಾಡಿದ್ದಾರೆ.</p>.<p>ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಶಾಂತಮೂರ್ತಿ ಅವರು, ‘ಎಸ್.ಎಂ. ಕೃಷ್ಣ ಅವಧಿಯಲ್ಲಿ ₹ 3,590 ಕೋಟಿ, ಧರ್ಮಸಿಂಗ್ ₹ 15,635 ಕೋಟಿ, ಎಚ್.ಡಿ. ಕುಮಾರಸ್ವಾಮಿ ₹ 3,545 ಕೋಟಿ, ಬಿ.ಎಸ್. ಯಡಿಯೂರಪ್ಪ ₹ 25,653 ಕೋಟಿ, ಸದಾನಂದಗೌಡ ₹ 9,464 ಕೋಟಿ, ಜಗದೀಶ ಶೆಟ್ಟರ್ ₹ 13,464 ಕೋಟಿ, ಸಿದ್ದರಾಮಯ್ಯ ₹ 2,42,000 ಕೋಟಿ ಸಾಲ ಮಾಡಿದರು.</p>.<p>ಎಸ್.ಎಂ. ಕೃಷ್ಣ ಅವಧಿಯಿಂದ ಶೆಟ್ಟರ್ವರೆಗೆ ಮಾಡಿದ ಒಟ್ಟು ಸಾಲ ₹ 71,331 ಕೋಟಿ, ಸಿದ್ದರಾಮಯ್ಯ ಅವರು ಮಾಡಿದ ಸಾಲ ₹ 2,42,000 ಕೋಟಿ. ಹೀಗಿರುವಾಗ ಬಿಟ್ಟಿ ಭಾಗ್ಯ ಕೊಡದೆ ಇನ್ನೇನು’ ಎಂದು ಬರಹದಲ್ಲಿ ಟೀಕಿಸಿದ್ದರು. ಈ ಮಾಹಿತಿಯನ್ನು ವಾಟ್ಸ್ಆ್ಯಪ್ ಗ್ರೂಪ್ಗಳಿಗೂ ಶೇರ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>