ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು ಮೂಲದ ಯುವತಿ ಈಗ ಭಾರತೀಯ ವಾಯುಸೇನೆಯ ವೈದ್ಯೆ

Last Updated 15 ಮೇ 2021, 21:23 IST
ಅಕ್ಷರ ಗಾತ್ರ

ಗನ್ನಾಯಕನಹಳ್ಳಿ (ಹಿರಿಯೂರು): ವಿದ್ಯಾನಗರ ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನ ಗನ್ನಾಯಕನಹಳ್ಳಿಯ ಯುವತಿ ಪ್ರಸ್ತುತ ಭಾರತೀಯ ವಾಯುಸೇನೆಯ ವೈದ್ಯ ಹುದ್ದೆಗೆ ಆಯ್ಕೆ ಆಗಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಟಿ.ಎಸ್. ತಿಪ್ಪೇಸ್ವಾಮಿ ಹಾಗೂ ಗೀತಾಸ್ವಾಮಿ ದಂಪತಿಯ ಎರಡನೇ ಮಗಳು ಡಾ.ನೇಹಾಸ್ವಾಮಿ ಬೆಂಗಳೂರಿನ ವಾಯುಸೇನೆ ಕಚೇರಿಯಲ್ಲಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಗನ್ನಾಯಕನಹಳ್ಳಿಯಲ್ಲಿ ಜನಿಸಿರುವ ನೇಹಾ 1 ಮತ್ತು 2ನೇ ತರಗತಿಯನ್ನು ಹೈದರಾಬಾದ್‌ನಲ್ಲಿ, 3ನೇ ತರಗತಿಯನ್ನು ಬಳ್ಳಾರಿಯಲ್ಲಿ, 4ರಿಂದ 7ರವರೆಗೆ ಹಿರಿಯೂರಿನಲ್ಲಿ, 8ನೇ ತರಗತಿಯನ್ನು ಚಿತ್ರದುರ್ಗದಲ್ಲಿ, ನಂತರ ದ್ವಿತೀಯ ಪಿಯುವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ, ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 2020ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ.

‘ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಮನಸ್ಸಿತ್ತು. ಕೋವಿಡ್ ಕಾರಣಕ್ಕೆ ಪದೇ ಪದೇ ಪರೀಕ್ಷೆಗಳು ಮುಂದೂಡಲಾದವು. 2020ರ ಜುಲೈನಲ್ಲಿ ನವದೆಹಲಿಯಿಂದ ಎಎಫ್‌ಎಂಎಸ್ (ಆರ್ಮಿ ಫೋರ್ಸ್ ಮೆಡಿಕಲ್ ಸರ್ವೀಸ್)ನಿಂದ ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಜುಲೈ ಕೊನೆಯ ವಾರದಲ್ಲಿ ಸಂದರ್ಶನ ನಡೆಸಿ, ನನ್ನನ್ನು ವೈದ್ಯ ಹುದ್ದೆಗೆ (ಫ್ಲೈಟ್ ಲೆಫ್ಟಿನೆಂಟ್ ಎಂದು ಕರೆಯಲಾಗುತ್ತದೆ. ಕ್ಯಾಪ್ಟನ್ ಹುದ್ದೆಗೆ ಸಮಾನವಾದುದು) ಆಯ್ಕೆ ಮಾಡಲಾಗಿದೆ’ ಎಂದು ನೇಹಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT