‘ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯ ಮನವೊಲಿಸಲಾಯಿತು. ಇಬ್ಬರೂ ಸ್ವ ಇಚ್ಛೆಯಿಂದ ಒಪ್ಪಿಕೊಂಡು ಮತ್ತೆ ಒಂದಾಗಿದ್ದಾರೆ. ರುದ್ರೇಶ್ ಕಡೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ದಂಪತಿ ಮಕ್ಕಳೊಂದಿಗೆ ಒಟ್ಟಿಗೆ ವಾಸವಾಗಿದ್ದಾರೆ’ ಎಂದು ಪತಿ ಪರ ವಕೀಲ ಜಿ.ಇ.ರಂಗಸ್ವಾಮಿ, ಪತ್ನಿ ಪರ ವಕೀಲ ಜಯದೇವ ತಿಳಿಸಿದರು.