‘ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸದಂತೆ ಸರ್ಕಾರಕ್ಕೆ ಪತ್ರ ಬರೆದ 61 ಕಿಡಿಗೇಡಿ ಸಾಹಿತಿಗಳು ನೀವು. ಸಂವಿಧಾನ ರಕ್ಷಣೆ ಹಾಗೂ ಬಹುತ್ವದ ಹೆಸರಿನಲ್ಲಿ ನಕಲಿ ಹೋರಾಟ ನಡೆಸುತ್ತಿದ್ದೀರಿ. ಸಂವಿಧಾನ, ರಾಷ್ಟ್ರಧ್ವಜ ಹಾಗೂ ಅಂಬೇಡ್ಕರ್ ಅವರನ್ನು ಗುರಾಣಿಯಂತೆ ಬಳಸಿಕೊಳ್ಳುವ ಇಸ್ಲಾಂಮಿಕ್ ಭಯೋತ್ಪಾದಕರ ಸಂಚನ್ನು ಬಿಹಾರದ ಪೊಲೀಸರು ಬಯಲುಗೊಳಿಸಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.