<p>ಚಿತ್ರದುರ್ಗ: ‘ಹಿಡಿದ ಕೆಲಸವನ್ನು ಬಿಡದೇ ಮಾಡುವ ಗುಣ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರದಾಗಿತ್ತು. ಈ ನಡೆಯಿಂದಲೇ ಅವರು ಸುತ್ತು-ಕಟ್ಟು ಎನ್ನುವ ಧ್ಯೇಯವಾಕ್ಯದೊಂದಿಗೆ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಸುತ್ತಿ ಮಠವನ್ನು ಕಟ್ಟಿದರು’ ಎಂದು ಎಸ್ಜೆಎಂ ಕಾನೂನು ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ.ಕೆ.ಎನ್. ವಿಶ್ವನಾಥ್ ತಿಳಿಸಿದರು.</p>.<p>ನಗರದ ಮುರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ತ್ರಿವಿಧ ದಾಸೋಹಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಶೂನ್ಯಪೀಠದ ಪ್ರಾರಂಭಿಕ ಹಂತದಲ್ಲಿನ 4 ಶತಮಾನಗಳ ಕಾಲ ಒಂದೆಡೆ ನಿಲ್ಲಲಿಲ್ಲ. ಎಡೆಯೂರು ಸಿದ್ದಲಿಂಗರ ಶ್ರಮದ ಫಲ ಮತ್ತು ಮುರುಘಾ ಪರಂಪರೆ ಪ್ರಾರಂಭದ ತರುವಾಯ ಅನೇಕ ಸ್ವಾಮೀಜಿಗಳು ತತ್ವ ಹಾಗೂ ಸಮಾಜ ಸುಧಾರಣೆಯ ಕಾರ್ಯ ಕೈಗೊಂಡರು’ ಎಂದರು.</p>.<p>‘ಬ್ಯಾಡಗಿಯ ಮುಪ್ಪಿನಸ್ವಾಮೀಜಿ ನಂತರ ಪೀಠಾಧ್ಯಕ್ಷರಾದವರು ಜಯದೇವ ಮುರುಘರಾಜೇಂದ್ರ ಸ್ವಾಮೀಜಿ. ಆ ಕಾಲಘಟ್ಟದಲ್ಲಿ ಗುರು–ವಿರಕ್ತರ ನಡುವಿನ ತಾರತಮ್ಯ, ಜಾತಿಗಳ ನಡುವೆ ಅಸಮಾನತೆ, ಒಳಪಂಗಡಗಳಲ್ಲಿ ಗೊಂದಲ ಹೆಚ್ಚಾಗಿತ್ತು. ಇಂತಹ ಸಮಯದಲ್ಲಿ ಜಯದೇವರು ಹಂತ–ಹಂತವಾಗಿ ಈ ಎಲ್ಲ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಅವರ ನಡೆ ಸಮಾಜಕ್ಕೊಂದು ದಿಕ್ಕಾಗಿ ಗೋಚರಿಸಿತು’ ಎಂದು ತಿಳಿಸಿದರು.</p>.<p>‘ವರ್ಣ, ಬಡತನ, ಲಿಂಗ ತಾರತಮ್ಯದಂತಹ ಸಾಮಾಜಿಕ ಪಿಡುಗುಗಳನ್ನು ತಮ್ಮ ಸಂಚಾರದ ವೇಳೆ ಪರಿಹರಿಸುತ್ತಿದ್ದರು. ಬಡವರಿಗೆ ದೀನದಲಿತರಿಗೆ ಎಲ್ಲಿಲ್ಲದ ಅಂತಃಕರಣ ತೋರಿಸಿ, ಅವರೂ ಸಮಾಜದಲ್ಲಿ ಎಲ್ಲರಂತೆ ಬಾಳಬೇಕೆಂಬ ಹಂಬಲದಿಂದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು’ ಎಂದು ಸ್ಮರಿಸಿದರು.</p>.<p>‘ಸಮಾಜದ ಅಭ್ಯುದಯಕ್ಕೆ ಸಂಚಾರ ಕೈಗೊಂಡು ರಾಜ್ಯ ಹೊರರಾಜ್ಯಗಳಲ್ಲಿ ಪ್ರಸಾದ ನಿಲಯ ಸ್ಥಾಪಿಸಿದವರು ಜಯದೇವ ಸ್ವಾಮೀಜಿ. ಇವರಿಗೆ ಮೈಸೂರಿನ ಅರಸರು ಅಂಬಾರಿ ಉತ್ಸವ ಮಾಡಿದ್ದರು. ಇದು ಶ್ರೀಗಳ ವ್ಯಕ್ತಿತ್ವವನ್ನು ತೋರಿಸುತ್ತದೆ’ ಎಂದು ಮುರುಘಾಮಠದ ಸಾಧಕ ಗುರು ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.</p>.<p>‘ಸಮಾಜದಿಂದ ಬಂದ ಸಂಪತ್ತನ್ನು ಮತ್ತೆ ಅದೇ ಸಮಾಜಕ್ಕೆ ಅನೇಕ ಸೇವೆಗಳ ಮೂಲಕ ವಿನಿಯೋಗಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಿಗೆ ಶ್ರೀಗಳು ಉದಾರವಾದ ದೇಣಿಗೆ ನೀಡಿದ್ದಾರೆ. ಅದು ಲಕ್ಷ–ಲಕ್ಷ ರೂಪದಲ್ಲಿದೆ ಎಂದರೆ ತಪ್ಪಿಲ್ಲ’ ಎಂದು ಹೇಳಿದರು.</p>.<p>ಹೇಮರೆಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪಾಲಾಕ್ಷಪ್ಪ, ಕಾರ್ಯದರ್ಶಿ ಡಿ.ಟಿ. ಶಿವಾನಂದಪ್ಪ, ಜಾಗತಿಕ ಲಿಂಗಾಯತ ಸಭಾದ ಬಸವರಾಜ ಕಟ್ಟಿ ಇದ್ದರು.</p>.<div><blockquote>ಜಯದೇವ ಶ್ರೀ ಶಿಸ್ತುಬದ್ಧ ಜೀವನದೊಂದಿಗೆ ಮಠವನ್ನು ಶ್ರೀಮಂತಗೊಳಿಸಿದರು. 53 ವರ್ಷ ದೀಪದಂತೆ ಬೆಳಗಿ ತಾನು ನೋವು ಅನುಭವಿಸಿ ಜಗಕೆ ಬೆಳಕು ನೀಡಿದರು. </blockquote><span class="attribution">-ಪ್ರೊ.ಕೆ.ಎನ್. ವಿಶ್ವನಾಥ್, ಹಿರಿಯ ಉಪನ್ಯಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ‘ಹಿಡಿದ ಕೆಲಸವನ್ನು ಬಿಡದೇ ಮಾಡುವ ಗುಣ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರದಾಗಿತ್ತು. ಈ ನಡೆಯಿಂದಲೇ ಅವರು ಸುತ್ತು-ಕಟ್ಟು ಎನ್ನುವ ಧ್ಯೇಯವಾಕ್ಯದೊಂದಿಗೆ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಸುತ್ತಿ ಮಠವನ್ನು ಕಟ್ಟಿದರು’ ಎಂದು ಎಸ್ಜೆಎಂ ಕಾನೂನು ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ.ಕೆ.ಎನ್. ವಿಶ್ವನಾಥ್ ತಿಳಿಸಿದರು.</p>.<p>ನಗರದ ಮುರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ತ್ರಿವಿಧ ದಾಸೋಹಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಶೂನ್ಯಪೀಠದ ಪ್ರಾರಂಭಿಕ ಹಂತದಲ್ಲಿನ 4 ಶತಮಾನಗಳ ಕಾಲ ಒಂದೆಡೆ ನಿಲ್ಲಲಿಲ್ಲ. ಎಡೆಯೂರು ಸಿದ್ದಲಿಂಗರ ಶ್ರಮದ ಫಲ ಮತ್ತು ಮುರುಘಾ ಪರಂಪರೆ ಪ್ರಾರಂಭದ ತರುವಾಯ ಅನೇಕ ಸ್ವಾಮೀಜಿಗಳು ತತ್ವ ಹಾಗೂ ಸಮಾಜ ಸುಧಾರಣೆಯ ಕಾರ್ಯ ಕೈಗೊಂಡರು’ ಎಂದರು.</p>.<p>‘ಬ್ಯಾಡಗಿಯ ಮುಪ್ಪಿನಸ್ವಾಮೀಜಿ ನಂತರ ಪೀಠಾಧ್ಯಕ್ಷರಾದವರು ಜಯದೇವ ಮುರುಘರಾಜೇಂದ್ರ ಸ್ವಾಮೀಜಿ. ಆ ಕಾಲಘಟ್ಟದಲ್ಲಿ ಗುರು–ವಿರಕ್ತರ ನಡುವಿನ ತಾರತಮ್ಯ, ಜಾತಿಗಳ ನಡುವೆ ಅಸಮಾನತೆ, ಒಳಪಂಗಡಗಳಲ್ಲಿ ಗೊಂದಲ ಹೆಚ್ಚಾಗಿತ್ತು. ಇಂತಹ ಸಮಯದಲ್ಲಿ ಜಯದೇವರು ಹಂತ–ಹಂತವಾಗಿ ಈ ಎಲ್ಲ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಅವರ ನಡೆ ಸಮಾಜಕ್ಕೊಂದು ದಿಕ್ಕಾಗಿ ಗೋಚರಿಸಿತು’ ಎಂದು ತಿಳಿಸಿದರು.</p>.<p>‘ವರ್ಣ, ಬಡತನ, ಲಿಂಗ ತಾರತಮ್ಯದಂತಹ ಸಾಮಾಜಿಕ ಪಿಡುಗುಗಳನ್ನು ತಮ್ಮ ಸಂಚಾರದ ವೇಳೆ ಪರಿಹರಿಸುತ್ತಿದ್ದರು. ಬಡವರಿಗೆ ದೀನದಲಿತರಿಗೆ ಎಲ್ಲಿಲ್ಲದ ಅಂತಃಕರಣ ತೋರಿಸಿ, ಅವರೂ ಸಮಾಜದಲ್ಲಿ ಎಲ್ಲರಂತೆ ಬಾಳಬೇಕೆಂಬ ಹಂಬಲದಿಂದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು’ ಎಂದು ಸ್ಮರಿಸಿದರು.</p>.<p>‘ಸಮಾಜದ ಅಭ್ಯುದಯಕ್ಕೆ ಸಂಚಾರ ಕೈಗೊಂಡು ರಾಜ್ಯ ಹೊರರಾಜ್ಯಗಳಲ್ಲಿ ಪ್ರಸಾದ ನಿಲಯ ಸ್ಥಾಪಿಸಿದವರು ಜಯದೇವ ಸ್ವಾಮೀಜಿ. ಇವರಿಗೆ ಮೈಸೂರಿನ ಅರಸರು ಅಂಬಾರಿ ಉತ್ಸವ ಮಾಡಿದ್ದರು. ಇದು ಶ್ರೀಗಳ ವ್ಯಕ್ತಿತ್ವವನ್ನು ತೋರಿಸುತ್ತದೆ’ ಎಂದು ಮುರುಘಾಮಠದ ಸಾಧಕ ಗುರು ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.</p>.<p>‘ಸಮಾಜದಿಂದ ಬಂದ ಸಂಪತ್ತನ್ನು ಮತ್ತೆ ಅದೇ ಸಮಾಜಕ್ಕೆ ಅನೇಕ ಸೇವೆಗಳ ಮೂಲಕ ವಿನಿಯೋಗಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಿಗೆ ಶ್ರೀಗಳು ಉದಾರವಾದ ದೇಣಿಗೆ ನೀಡಿದ್ದಾರೆ. ಅದು ಲಕ್ಷ–ಲಕ್ಷ ರೂಪದಲ್ಲಿದೆ ಎಂದರೆ ತಪ್ಪಿಲ್ಲ’ ಎಂದು ಹೇಳಿದರು.</p>.<p>ಹೇಮರೆಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪಾಲಾಕ್ಷಪ್ಪ, ಕಾರ್ಯದರ್ಶಿ ಡಿ.ಟಿ. ಶಿವಾನಂದಪ್ಪ, ಜಾಗತಿಕ ಲಿಂಗಾಯತ ಸಭಾದ ಬಸವರಾಜ ಕಟ್ಟಿ ಇದ್ದರು.</p>.<div><blockquote>ಜಯದೇವ ಶ್ರೀ ಶಿಸ್ತುಬದ್ಧ ಜೀವನದೊಂದಿಗೆ ಮಠವನ್ನು ಶ್ರೀಮಂತಗೊಳಿಸಿದರು. 53 ವರ್ಷ ದೀಪದಂತೆ ಬೆಳಗಿ ತಾನು ನೋವು ಅನುಭವಿಸಿ ಜಗಕೆ ಬೆಳಕು ನೀಡಿದರು. </blockquote><span class="attribution">-ಪ್ರೊ.ಕೆ.ಎನ್. ವಿಶ್ವನಾಥ್, ಹಿರಿಯ ಉಪನ್ಯಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>