ಜಿಲ್ಲಾ ರಸ್ತೆಗೆ ಸೇರಬೇಕಾದ ರಸ್ತೆಯ ಬದಿಯಲ್ಲಿಯೇ ಹಿಂದೆ ಕಟ್ಟಡವನ್ನು ಹೊಂದಿದ್ದ ಮಾಲೀಕರು ಮತ್ತೆ ಮಳಿಗೆಗಳನ್ನು ಕಟ್ಟುತ್ತಿದ್ದರು. ಇದನ್ನು ಗಮನಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ನಲ್ಲಿ ಕಟ್ಟಡವನ್ನು ತೆರವುಗೊಳಿಸಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಪ್ಪ, ಸಹಾಯಕ ಎಂಜಿನಿಯರ್ ಜಯಣ್ಣ, ಪಿಎಸ್ಐ ರಾಜು, ಪಿಡಿಒ ಶಿವಪ್ಪ ಇದ್ದರು.