‘ಕೆಲವು ಕಡೆ ಮಕ್ಕಳಿಲ್ಲದಿದ್ದರೂ ಹೆಚ್ಚು ಕೊಠಡಿ ನಿರ್ಮಿಸಲಾಗಿದ್ದು, ಬಳಕೆ ಆಗದೆ ವ್ಯರ್ಥವಾಗುತ್ತಿವೆ. ಆದರೆ ನಮ್ಮ ಗ್ರಾಮದಲ್ಲಿ ಹೆಚ್ಚು ವಿದ್ಯಾರ್ಥಿಗಳಿದ್ದರೂ ಕೇವಲ 2 ಕೊಠಡಿಗಳಿವೆ. ಗ್ರಾಮದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿದ್ದು, ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಕೊಠಡಿ ನಿರ್ಮಿಸಿಕೊಡಬೇಕು’ ಎಂದು ಗ್ರಾಮದ ಮುಖಂಡರಾದ ಎಚ್.ವೆಂಕಟೇಶ್, ಪಿ.ಟಿ. ತಿಮ್ಮಯ್ಯ,ರಾಧಮ್ಮ, ಶ್ರೀನಿವಾಸ್, ರುದ್ರಮುನಿ, ರತ್ನಮ್ಮ, ಮಂಜುನಾಥ್, ಸುವರ್ಣಮ್ಮ, ಲಲಿತಮ್ಮ ಆಗ್ರಹಿಸಿದ್ದಾರೆ.