ಶಿವಮೊಗ್ಗ: ಇಲ್ಲಿನ ಮತ್ತೋಡು ರಸ್ತೆಯ ರತ್ನಾಕರ ಲೇಔಟ್ನಲ್ಲಿ ಬುಧವಾರ ತಾಯಿಯೇ ಮಗಳ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಶಿಕಾರಿಪುರದ ಬನಶ್ರೀ ಲಯನ್ಸ್ ಪಿಯು ಕಾಲೇಜು ವಿದ್ಯಾರ್ಥಿನಿ ಲತಾ ಕೊಲೆಯಾದವರು.
ತಾಯಿ ಲತಾ ಈ ಕೃತ್ಯ ಎಸಗಿದ್ದಾರೆ.ಹತ್ತಿರದ ಸಂಬಂಧಿ ಕಾರು ಚಾಲಕನ ಜತೆ ಸಂಬಂಧ ಹೊಂದಿರುವುದು ಮಗಳಿಗೆ ಗೊತ್ತಾದ ಕಾರಣ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.