<p><strong>ಮಂಗಳೂರು</strong>: ನಗರದ ಪಂಪ್ವೆಲ್ ಉಜ್ಜೋಡಿಯ ಪೆಟ್ರೋಲ್ ಬಂಕ್ನಲ್ಲಿ ಹಣ ಕಳವು ಮಾಡಿದ ಮೂವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಕೆ.ಸಿ.ರೋಡ್ನ ಮೊಹಮ್ಮದ್ ಸುಹೈಲ್, ತಲಪಾಡಿ ಕೆ.ಸಿ. ನಗರದ ಆಶಿಕ್ ಅಲಿಯಾಸ್ ಅಹ್ಮದ್ ಆಶಿಕ್ ಅಲಿಯಾಸ್ ಕೊಲ್ಲೇ ಆಶಿಕ್ ಅಲಿಯಾ ಇರ್ಫಾನ್, ಫಳ್ನೀರ್ ರಸ್ತೆಯ ಮಹಮ್ಮದ್ ಅರ್ಫಾನ್ ಬಂಧಿತ ಆರೋಪಿಗಳು. ಇವರಿಂದ ಬೈಕ್, ನಗದು ಹಾಗೂ ಮಾರಕಾಯುಧಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಸೆಪ್ಟೆಂಬರ್ 20 ರಂದು ರಾತ್ರಿ ಉಜ್ಜೋಡಿಯ ದಾಮೋದರ ಸುವರ್ಣ ಪೆಟ್ರೋಲ್ ಬಂಕ್ನಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಇವರು, ಶಟರ್ ಮುರಿದು ಹಣ ಕಳವು ಮಾಡಿದ್ದರು. ಬಂಧಿತ ಆರೋಪಿಗಳು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.</p>.<p class="Briefhead"><strong>ಕಳವು: ಮೂವರ ಬಂಧನ</strong></p>.<p><strong>ಮಂಗಳೂರು: </strong>ನಗರದ ಶಿವಬಾಗ್ನ ತಾರೆತೋಟದ ಮನೆಯಲ್ಲಿ ಹಾಡಹಗಲೇ ಕಳ್ಳತನ ಮಾಡಿದ ಮೂವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.</p>.<p>ಹಾಸನ ಹೊಳೆನರಸೀಪುರ ಶಿವಗಾಮಿ, ಮಂಜು, ಲಚಿಮಿ ಬಂಧಿತರು. ಆರೋಪಿಗಳಿಂದ ಕಳವಾದ ಸ್ವತ್ತು ಮತ್ತು ಕಳವು ಮಾಡಲು ಉಪಯೋಗಿಸಿದ ಸಾಧನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಶಿವಬಾಗ್ ತಾರೆತೋಟದ ಬಳಿ ನಿವಾಸಿಯೊಬ್ಬರು ಸೆಪ್ಟೆಂಬರ್ 13ರಂದು ಹಗಲು ಹೊತ್ತು ಮನೆಗೆ ಬೀಗ ಹಾಕಿ, ಹೊರಗೆ ಹೋದ ಸಂದರ್ಭದಲ್ಲಿ ಕಳ್ಳರು ₹1.60 ಲಕ್ಷ ಮೌಲ್ಯದ ಚಿನ್ನಾಭರಣ, ₹18 ಸಾವಿರ ನಗದು ಕಳವು ಮಾಡಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ನಗರದ ಪಂಪ್ವೆಲ್ ಉಜ್ಜೋಡಿಯ ಪೆಟ್ರೋಲ್ ಬಂಕ್ನಲ್ಲಿ ಹಣ ಕಳವು ಮಾಡಿದ ಮೂವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.</p>.<p>ಕೆ.ಸಿ.ರೋಡ್ನ ಮೊಹಮ್ಮದ್ ಸುಹೈಲ್, ತಲಪಾಡಿ ಕೆ.ಸಿ. ನಗರದ ಆಶಿಕ್ ಅಲಿಯಾಸ್ ಅಹ್ಮದ್ ಆಶಿಕ್ ಅಲಿಯಾಸ್ ಕೊಲ್ಲೇ ಆಶಿಕ್ ಅಲಿಯಾ ಇರ್ಫಾನ್, ಫಳ್ನೀರ್ ರಸ್ತೆಯ ಮಹಮ್ಮದ್ ಅರ್ಫಾನ್ ಬಂಧಿತ ಆರೋಪಿಗಳು. ಇವರಿಂದ ಬೈಕ್, ನಗದು ಹಾಗೂ ಮಾರಕಾಯುಧಗಳನ್ನು ವಶಕ್ಕೆ ಪಡೆಯಲಾಗಿದೆ.</p>.<p>ಸೆಪ್ಟೆಂಬರ್ 20 ರಂದು ರಾತ್ರಿ ಉಜ್ಜೋಡಿಯ ದಾಮೋದರ ಸುವರ್ಣ ಪೆಟ್ರೋಲ್ ಬಂಕ್ನಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಇವರು, ಶಟರ್ ಮುರಿದು ಹಣ ಕಳವು ಮಾಡಿದ್ದರು. ಬಂಧಿತ ಆರೋಪಿಗಳು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.</p>.<p class="Briefhead"><strong>ಕಳವು: ಮೂವರ ಬಂಧನ</strong></p>.<p><strong>ಮಂಗಳೂರು: </strong>ನಗರದ ಶಿವಬಾಗ್ನ ತಾರೆತೋಟದ ಮನೆಯಲ್ಲಿ ಹಾಡಹಗಲೇ ಕಳ್ಳತನ ಮಾಡಿದ ಮೂವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.</p>.<p>ಹಾಸನ ಹೊಳೆನರಸೀಪುರ ಶಿವಗಾಮಿ, ಮಂಜು, ಲಚಿಮಿ ಬಂಧಿತರು. ಆರೋಪಿಗಳಿಂದ ಕಳವಾದ ಸ್ವತ್ತು ಮತ್ತು ಕಳವು ಮಾಡಲು ಉಪಯೋಗಿಸಿದ ಸಾಧನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಶಿವಬಾಗ್ ತಾರೆತೋಟದ ಬಳಿ ನಿವಾಸಿಯೊಬ್ಬರು ಸೆಪ್ಟೆಂಬರ್ 13ರಂದು ಹಗಲು ಹೊತ್ತು ಮನೆಗೆ ಬೀಗ ಹಾಕಿ, ಹೊರಗೆ ಹೋದ ಸಂದರ್ಭದಲ್ಲಿ ಕಳ್ಳರು ₹1.60 ಲಕ್ಷ ಮೌಲ್ಯದ ಚಿನ್ನಾಭರಣ, ₹18 ಸಾವಿರ ನಗದು ಕಳವು ಮಾಡಿದ್ದರು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>