ಚಾಲಕ ಪಾನಮತ್ತನಾಗಿ ಲಾರಿ ಚಲಾಯಿಸಿ, ಜೀವ ಬಲಿ ತೆಗೆದುಕೊಂಡಿದ್ದರೆ, ಅಂತಹವರನ್ನು ಚಾಲಕರನ್ನಾಗಿ ನೇಮಿಸಿಕೊಂಡಿರುವ ಮಾಲೀಕರ ವಿರುದ್ಧ ಕೂಡ ಪ್ರಕರಣ ದಾಖಲಿಸಬೇಕು. ಪಂಪ್ವೆಲ್ನಿಂದ ತಲಪಾಡಿವರೆಗೆ ಹೆದ್ದಾರಿಗಳ ಪ್ರಮುಖ ತಿರುವುಗಳಲ್ಲಿ ರಾತ್ರಿ ವೇಳೆ ರಿಫ್ಲೆಕ್ಟರ್ಗಳು ಇಲ್ಲ. ಹೀಗಾಗಿ, ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕೂಡ ಪ್ರಕರಣ ದಾಖಲಿಸಬೇಕು. ಅಪಘಾತ ಸಂಭವಿಸಿ, 40 ನಿಮಿಷಗಳ ನಂತರ ಆಂಬುಲೆನ್ಸ್ ಸ್ಥಳಕ್ಕೆ ಬಂದಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.