ಇತ್ತೀಚೆಗೆ ವಿಜಯಪುರದ ಕಾಶಿರಾಯ ಬೊಮ್ಮನಹಳ್ಳಿ ನಿವಾಸಕ್ಕೆ ಭೇಟಿ ನೀಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮಾತೃಸಂಸ್ಥೆಯಾದ ನಟ್ಟೋಜ ಫೌಂಡೇಷನ್ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಮೃತ ಯೋಧನ ಪತ್ನಿ ಸಂಗೀತಾ ಕಾಶೀರಾಯ ಬೊಮ್ಮನಹಳ್ಳಿ ಅವರೊಂದಿಗೆ ಮಾತುಕತೆ ನಡೆಸಿ ಉಚಿತ ಶಿಕ್ಷಣದ ಕೊಡುಗೆಯ ಅಧಿಕೃತ ಪತ್ರವನ್ನು ಹಸ್ತಾಂತರಿಸಿದರು. ಕಾಶಿರಾಯ ಅವರ ಪುತ್ರಿ ಪೃಥ್ವಿ ಪ್ರಸ್ತುತ ಎರಡನೇ ತರಗತಿ ಓದುತ್ತಿದ್ದು, ಪುತ್ರ ಭಗತ್ ಸಿಂಗ್ ಚಿಕ್ಕವನಾಗಿದ್ದಾನೆ.