10 ಗಂಟೆಗೆ ಉದ್ಘಾಟನೆ, ನಂತರ ರಂಗಭೂಮಿ, ಸಿನಿಮಾ ದಿಗ್ಗಜರು, ಯುವ ಸಮುದಾಯದೊಂದಿಗೆ ಸಂವಹನ ನಡೆಯಲಿದೆ. ಕಾಸರಗೋಡು ಚಿನ್ನ, ಜೋಗಿ, ವಿನು ಬಳಂಜ ಮತ್ತಿತರರು ಭಾಗವಹಿಸುವರು. ಮಧ್ಯಾಹ್ನ 2 ಗಂಟೆಯಿಂದ ಮಣಿಕಾಂತ್ ಕದ್ರಿ, ರವೀಂದ್ರ ಪ್ರಭು ಹಾಗೂ ತಂಡದಿಂದ ಅನಂತನಾಗ್ ನಟನೆಯ ಚಿತ್ರದ ಆಯ್ದ ಜನಪ್ರಿಯ ಹಾಡುಗಳು, ನೃತ್ಯ ವೈವಿಧ್ಯದ ನಂತರ ಸಂಜೆ 6ರಿಂದ 8 ಗಂಟೆಯವರೆಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ಚಿತ್ರನಟ ರಿಷಬ್ ಶೆಟ್ಟಿ, ಕಲಾವಿದ ದೇವಿದಾಸ್ ಕಾಪಿಕಾಡ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್ ಭಾಗವಹಿಸುವರು ಎಂದರು.