<p><strong>ಮಂಗಳೂರು</strong>: ‘ಲಕ್ಷಾಂತರ ಅಭಿಮಾನಗಳನ್ನು ಹೊಂದಿರುವ ನಟ ಅನಂತನಾಗ್ ಅವರಿಗೆ ಸೆಪ್ಟೆಂಬರ್ 4ರಂದು 75ರ ಸಡಗರ. ಈ ಖುಷಿಯನ್ನು ಸಂಭ್ರಮಿಸಲು ಅನಂತನಾಗ್ ಉಪಸ್ಥಿತಿಯಲ್ಲಿ ಸೆ.3ರಂದು ದಿನವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅನಂತನಾಗ್ ಅಭಿನಂದನಾ ಸಮಿತಿ ಸಂಚಾಲಕ ಗೋಪಿನಾಥ್ ಭಟ್ ತಿಳಿಸಿದರು.</p>.<p>ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂದು ಬೆಳಿಗ್ಗೆ 9.30ಕ್ಕೆ ಅನಂತನಾಗ್ ದಂಪತಿಯನ್ನು ಡೊಂಗರಕೇರಿ ಕೆನರಾ ಪ್ರೌಢಶಾಲೆ ಆವರಣದಿಂದ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಗುವುದು. ಹುಲಿವೇಷ, ಚೆಂಡೆ, ವಾದ್ಯ, ಕೊಂಬು ಮೆರವಣಿಗೆಯ ಆಕರ್ಷಣೆಯಾಗಿದೆ’ ಎಂದರು.</p>.<p>10 ಗಂಟೆಗೆ ಉದ್ಘಾಟನೆ, ನಂತರ ರಂಗಭೂಮಿ, ಸಿನಿಮಾ ದಿಗ್ಗಜರು, ಯುವ ಸಮುದಾಯದೊಂದಿಗೆ ಸಂವಹನ ನಡೆಯಲಿದೆ. ಕಾಸರಗೋಡು ಚಿನ್ನ, ಜೋಗಿ, ವಿನು ಬಳಂಜ ಮತ್ತಿತರರು ಭಾಗವಹಿಸುವರು. ಮಧ್ಯಾಹ್ನ 2 ಗಂಟೆಯಿಂದ ಮಣಿಕಾಂತ್ ಕದ್ರಿ, ರವೀಂದ್ರ ಪ್ರಭು ಹಾಗೂ ತಂಡದಿಂದ ಅನಂತನಾಗ್ ನಟನೆಯ ಚಿತ್ರದ ಆಯ್ದ ಜನಪ್ರಿಯ ಹಾಡುಗಳು, ನೃತ್ಯ ವೈವಿಧ್ಯದ ನಂತರ ಸಂಜೆ 6ರಿಂದ 8 ಗಂಟೆಯವರೆಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ಚಿತ್ರನಟ ರಿಷಬ್ ಶೆಟ್ಟಿ, ಕಲಾವಿದ ದೇವಿದಾಸ್ ಕಾಪಿಕಾಡ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್ ಭಾಗವಹಿಸುವರು ಎಂದರು.</p>.<p>ಅನಂತನಾಗ್ ಅವರ ವೃತ್ತಿ ಜೀವನ 50 ವಸಂತಗಳನ್ನು ಕಂಡಿದೆ. ಅವರಿಗೀಗ 75ರ ಹರೆಯ. ಸಾರ್ಥಕ ಬದುಕಿನ ಅಮೃತ ಘಳಿಗೆಯನ್ನು ಅರ್ಥವತ್ತಾಗಿ ಆಚರಿಸಲು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಅನಂತನಾಗ್ ಅಭಿನಂದನಾ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.</p>.<p>ಪತ್ರಕರ್ತ ಮನೋಹರ ಪ್ರಸಾದ್, ಅಭಿನಂದನಾ ಸಮಿತಿಯ ಗೋಪಾಲಕೃಷ್ಣ ಶೆಟ್ಟಿ, ಗಿರಿಧರ್ ಶೆಟ್ಟಿ, ಕುದ್ರೋಳಿ ಗಣೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ‘ಲಕ್ಷಾಂತರ ಅಭಿಮಾನಗಳನ್ನು ಹೊಂದಿರುವ ನಟ ಅನಂತನಾಗ್ ಅವರಿಗೆ ಸೆಪ್ಟೆಂಬರ್ 4ರಂದು 75ರ ಸಡಗರ. ಈ ಖುಷಿಯನ್ನು ಸಂಭ್ರಮಿಸಲು ಅನಂತನಾಗ್ ಉಪಸ್ಥಿತಿಯಲ್ಲಿ ಸೆ.3ರಂದು ದಿನವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅನಂತನಾಗ್ ಅಭಿನಂದನಾ ಸಮಿತಿ ಸಂಚಾಲಕ ಗೋಪಿನಾಥ್ ಭಟ್ ತಿಳಿಸಿದರು.</p>.<p>ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಅಂದು ಬೆಳಿಗ್ಗೆ 9.30ಕ್ಕೆ ಅನಂತನಾಗ್ ದಂಪತಿಯನ್ನು ಡೊಂಗರಕೇರಿ ಕೆನರಾ ಪ್ರೌಢಶಾಲೆ ಆವರಣದಿಂದ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಗುವುದು. ಹುಲಿವೇಷ, ಚೆಂಡೆ, ವಾದ್ಯ, ಕೊಂಬು ಮೆರವಣಿಗೆಯ ಆಕರ್ಷಣೆಯಾಗಿದೆ’ ಎಂದರು.</p>.<p>10 ಗಂಟೆಗೆ ಉದ್ಘಾಟನೆ, ನಂತರ ರಂಗಭೂಮಿ, ಸಿನಿಮಾ ದಿಗ್ಗಜರು, ಯುವ ಸಮುದಾಯದೊಂದಿಗೆ ಸಂವಹನ ನಡೆಯಲಿದೆ. ಕಾಸರಗೋಡು ಚಿನ್ನ, ಜೋಗಿ, ವಿನು ಬಳಂಜ ಮತ್ತಿತರರು ಭಾಗವಹಿಸುವರು. ಮಧ್ಯಾಹ್ನ 2 ಗಂಟೆಯಿಂದ ಮಣಿಕಾಂತ್ ಕದ್ರಿ, ರವೀಂದ್ರ ಪ್ರಭು ಹಾಗೂ ತಂಡದಿಂದ ಅನಂತನಾಗ್ ನಟನೆಯ ಚಿತ್ರದ ಆಯ್ದ ಜನಪ್ರಿಯ ಹಾಡುಗಳು, ನೃತ್ಯ ವೈವಿಧ್ಯದ ನಂತರ ಸಂಜೆ 6ರಿಂದ 8 ಗಂಟೆಯವರೆಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ಚಿತ್ರನಟ ರಿಷಬ್ ಶೆಟ್ಟಿ, ಕಲಾವಿದ ದೇವಿದಾಸ್ ಕಾಪಿಕಾಡ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್ ಭಾಗವಹಿಸುವರು ಎಂದರು.</p>.<p>ಅನಂತನಾಗ್ ಅವರ ವೃತ್ತಿ ಜೀವನ 50 ವಸಂತಗಳನ್ನು ಕಂಡಿದೆ. ಅವರಿಗೀಗ 75ರ ಹರೆಯ. ಸಾರ್ಥಕ ಬದುಕಿನ ಅಮೃತ ಘಳಿಗೆಯನ್ನು ಅರ್ಥವತ್ತಾಗಿ ಆಚರಿಸಲು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಅನಂತನಾಗ್ ಅಭಿನಂದನಾ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.</p>.<p>ಪತ್ರಕರ್ತ ಮನೋಹರ ಪ್ರಸಾದ್, ಅಭಿನಂದನಾ ಸಮಿತಿಯ ಗೋಪಾಲಕೃಷ್ಣ ಶೆಟ್ಟಿ, ಗಿರಿಧರ್ ಶೆಟ್ಟಿ, ಕುದ್ರೋಳಿ ಗಣೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>