‘ನಾನು ಬಾರ್ಗೆ ತೆರಳಿದಾಗ ಆರೋಪಿಗಳಾದ ಕುಲದೀಪ್, ಬಿಪಿನ್ ಹಾಗೂ ಅಜೇಯ ಬಾಗಿಲಿಗೆ ಅಡ್ಡವಾಗಿ ನಿಂತಿದ್ದರು. ನಾನು ಬಾರ್ನೊಳಗೆ ಪ್ರವೇಶಿಸುವಾಗ ಕುಲದೀಪ್ ಅವರ ಕೈ ತಾಗಿದೆ. ಇದರಿಂದ ಕೋಪಗೊಂಡ ಆತ ನನ್ನನ್ನು ದೂಡಿ ಅವಾಚ್ಯವಾಗಿ ನಿಂದಿಸಿ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾನೆ. ಈ ವೇಳೆ ಮತ್ತೊಬ್ಬ ಆರೋಪಿ ಕುಲದೀಪ್, ಅಜೇಯ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂದರ್ಭ ಬೊಬ್ಬೆ ಕೇಳಿ ಬಾರ್ನಲ್ಲಿದ್ದ ಸಿಬ್ಬಂದಿ, ಜನ ಓಡಿ ಬಂದಾಗ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದು ಜೋಸೆಫ್ ನೀಡಿರುವ ದೂರಿನಲ್ಲಿ ಆಪಾದಿಸಿದ್ದಾರೆ.