ಮುಡಿಪು: ಮಲೇಷ್ಯಾದ ಸಾರಾವಾಕ್ ಕುಚೆಂಗ್ನ, ನಗೇರಿ ಸ್ಟೇಡಿಯಂನಲ್ಲಿ ನಡೆದ 21ನೇ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ –2019 ಇದರಲ್ಲಿ ಭಾರತವನ್ನು ಪ್ರತಿನಿಧಿಸಿದ ಶುಭ ಕೆ.ಎಚ್ ಅವರು ಟ್ರಿಪಲ್ ಜಂಪ್ನಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ಮಂಗಳೂರಿನ ಜೆಪ್ಪು ನಿವಾಸಿಯಾಗಿರುವ ಇವರು ಮುಡಿಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದಾರೆ. ನಿವೃತ್ತ ಎಎಸ್ಐ ಶಿವರಾಮ ಮತ್ತು ಸುಲೋಚನಾ ಇವರ ಪುತ್ರಿ. ಇವರು ಪ್ರಶಾಂತ್ ನುಳ್ಳಿಪ್ಪಾಡಿಯವರ ಪತ್ನಿಯಾಗಿದ್ದಾರೆ.