<p><strong>ಉಳ್ಳಾಲ: </strong>ಮದುವೆ ಸಭಾಂಗಣದಲ್ಲಿ ಇಬ್ಬರು ಮದು ಮಕ್ಕಳು ಎನ್ಆರ್ಸಿ, ಸಿಎಎ ವಿರುದ್ಧ ಭಿತ್ತಿಪತ್ರ ಹಿಡಿದು ಪ್ರದರ್ಶಿಸಿದರು.</p>.<p>ಉಳ್ಳಾಲದ ಮಾಸ್ತಿಕಟ್ಟೆಯ ಎಂ.ಸಿ.ಮಂಝಿಲ್ ನಿವಾಸಿ ದಿ.ಚಾಯಬ್ಬ ಅವರ ಪುತ್ರ ಮೊಹಮ್ಮದ್ ರಿಲ್ವಾನ್ ಮತ್ತು ಉಳ್ಳಾಲ ಅಲೇಕಳದ ಯು.ಎಸ್.ಹನೀಫ್ ಅವರ ಪುತ್ರ ಯು.ಎಸ್.ನಿಹಾಲ್ ಅವರು ತೊಕ್ಕೊಟ್ಟು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಬುಧವಾರ ಜನಜಾಗೃತಿ ಮೂಡಿಸಿದರು.</p>.<p>‘ಪೌರತ್ವ ಕಾಯ್ದೆ ವಿರುದ್ಧ ಎಲ್ಲೆಡೆ ಜಾಗೃತಿ ಮೂಡುತ್ತಿರುವಾಗ ಅದರ ಒಂದು ಭಾಗವಾಗಿ ನಾವೂ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ದೇಶದ ಸಂವಿಧಾನ ಉಳಿಸುವುದು ಎಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಹಾರೈಸಲು ಬಂದವರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ಮದುಮಗ ಮೊಹಮ್ಮದ್ ರಿಲ್ವಾನ್ ಹೇಳಿದರು.</p>.<p>‘ಮನುಷ್ಯನ ಬದುಕನ್ನು ಅಣಕಿಸುವ ಕೇಂದ್ರದ ಬಿಜೆಪಿ ಸರ್ಕಾರದ ಅಮಾನವೀಯ, ಜನಾಂಗ ದ್ವೇಷಿ ಮಸೂದೆಯನ್ನು ವಿರೋಧಿಸುವುದನ್ನು ಸಾರ್ವತ್ರಿಕಗೊಳಿಸಿ, ಎನ್ಆರ್ಸಿ, ಸಿಎಎಗೆ ಇತಿಶ್ರೀ ಹಾಡಲು ಕಾರಣಕರ್ತರಾಗುವುದು ನಮ್ಮ ಕರ್ತವ್ಯವಾಗಲಿ’ ಎಂದರು.</p>.<p>ಯು.ಎಸ್ ನಿಹಾಲ್ ಅವರು ರಿಲ್ವಾನ್ ಅವರ ಸಹೋದರಿ ಜತೆಗೆ ನಿಖಾಹ್ ಮಾಡಿಕೊಂಡಿದ್ದು, ಇದೇ ಸಂದರ್ಭ ರಿಲ್ವಾನ್ ಅವರ ನಿಖಾಹ್ ಕೂಡ ನಡೆಯಿತು. ನಿಖಾಹ್ ನಡೆದ ನಂತರ ತಮಗೆ ಸುಖ ದಾಂಪತ್ಯವನ್ನು ಕೋರಿ ಹಾರೈಸಲು ನೆರೆದ ಊರ - ಪರವೂರ ಬಾಂಧವರಲ್ಲಿ ಎನ್ಆರ್ಸಿ - ಸಿಎಎ ವಿರುದ್ಧ ಧ್ವನಿ ಎತ್ತುವಂತೆ, ಭಿತ್ತಿ ಪತ್ರ ಎತ್ತಿ ಹಿಡಿದು ಸಾರ್ವಜನಿಕ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಳ್ಳಾಲ: </strong>ಮದುವೆ ಸಭಾಂಗಣದಲ್ಲಿ ಇಬ್ಬರು ಮದು ಮಕ್ಕಳು ಎನ್ಆರ್ಸಿ, ಸಿಎಎ ವಿರುದ್ಧ ಭಿತ್ತಿಪತ್ರ ಹಿಡಿದು ಪ್ರದರ್ಶಿಸಿದರು.</p>.<p>ಉಳ್ಳಾಲದ ಮಾಸ್ತಿಕಟ್ಟೆಯ ಎಂ.ಸಿ.ಮಂಝಿಲ್ ನಿವಾಸಿ ದಿ.ಚಾಯಬ್ಬ ಅವರ ಪುತ್ರ ಮೊಹಮ್ಮದ್ ರಿಲ್ವಾನ್ ಮತ್ತು ಉಳ್ಳಾಲ ಅಲೇಕಳದ ಯು.ಎಸ್.ಹನೀಫ್ ಅವರ ಪುತ್ರ ಯು.ಎಸ್.ನಿಹಾಲ್ ಅವರು ತೊಕ್ಕೊಟ್ಟು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಬುಧವಾರ ಜನಜಾಗೃತಿ ಮೂಡಿಸಿದರು.</p>.<p>‘ಪೌರತ್ವ ಕಾಯ್ದೆ ವಿರುದ್ಧ ಎಲ್ಲೆಡೆ ಜಾಗೃತಿ ಮೂಡುತ್ತಿರುವಾಗ ಅದರ ಒಂದು ಭಾಗವಾಗಿ ನಾವೂ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ದೇಶದ ಸಂವಿಧಾನ ಉಳಿಸುವುದು ಎಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಹಾರೈಸಲು ಬಂದವರಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ಮದುಮಗ ಮೊಹಮ್ಮದ್ ರಿಲ್ವಾನ್ ಹೇಳಿದರು.</p>.<p>‘ಮನುಷ್ಯನ ಬದುಕನ್ನು ಅಣಕಿಸುವ ಕೇಂದ್ರದ ಬಿಜೆಪಿ ಸರ್ಕಾರದ ಅಮಾನವೀಯ, ಜನಾಂಗ ದ್ವೇಷಿ ಮಸೂದೆಯನ್ನು ವಿರೋಧಿಸುವುದನ್ನು ಸಾರ್ವತ್ರಿಕಗೊಳಿಸಿ, ಎನ್ಆರ್ಸಿ, ಸಿಎಎಗೆ ಇತಿಶ್ರೀ ಹಾಡಲು ಕಾರಣಕರ್ತರಾಗುವುದು ನಮ್ಮ ಕರ್ತವ್ಯವಾಗಲಿ’ ಎಂದರು.</p>.<p>ಯು.ಎಸ್ ನಿಹಾಲ್ ಅವರು ರಿಲ್ವಾನ್ ಅವರ ಸಹೋದರಿ ಜತೆಗೆ ನಿಖಾಹ್ ಮಾಡಿಕೊಂಡಿದ್ದು, ಇದೇ ಸಂದರ್ಭ ರಿಲ್ವಾನ್ ಅವರ ನಿಖಾಹ್ ಕೂಡ ನಡೆಯಿತು. ನಿಖಾಹ್ ನಡೆದ ನಂತರ ತಮಗೆ ಸುಖ ದಾಂಪತ್ಯವನ್ನು ಕೋರಿ ಹಾರೈಸಲು ನೆರೆದ ಊರ - ಪರವೂರ ಬಾಂಧವರಲ್ಲಿ ಎನ್ಆರ್ಸಿ - ಸಿಎಎ ವಿರುದ್ಧ ಧ್ವನಿ ಎತ್ತುವಂತೆ, ಭಿತ್ತಿ ಪತ್ರ ಎತ್ತಿ ಹಿಡಿದು ಸಾರ್ವಜನಿಕ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>