ಮಂಗಳೂರು: ನಗರದ ಲೇಡಿಹಿಲ್ ವೃತ್ತದ ನಾಮಕರಣ ವಿಷಯ ಕಗ್ಗಂಟಾಗುತ್ತಿರುವ ಸಂದರ್ಭದಲ್ಲಿ ಬುಧವಾರ ಸಂಜೆ ಬಜರಂಗ ದಳದ ಧ್ವಜವನ್ನು ಹೊಂದಿ ‘ನಾರಾಯಣ ಗುರು ವೃತ್ತ’ ನಾಮಫಲಕವನ್ನು ಅಳವಡಿಸಲಾಗಿತ್ತು. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನಾಮಕರಣ ವಿಷಯದ ಕುರಿತು ಪರ–ವಿರೋಧ ಚರ್ಚೆ ನಡೆಯುತ್ತಿದೆ. ಪಾಲಿಕೆಯಿಂದ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಏಕಾಏಕಿ ವೃತ್ತದ ಮಧ್ಯದಲ್ಲಿ ಫಲಕ ಅಳವಡಿಸಲಾಗಿದೆ. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು, ಸ್ಥಳಕ್ಕೆ ಬಂದು ಫಲಕ ತೆರವು ಮಾಡಿದ್ದಾರೆ.