ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ, ‘ವಿವಿಧ ಭಾಷೆಗಳನ್ನು ಒಳಗೊಂಡ ಸಾಮರಸ್ಯದ ನಾಡು ನಮ್ಮದು. ಬ್ಯಾರಿ, ತುಳು, ಕೊಂಕಣಿ ಭಾಷೆಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಇಂತಹ ಭಾಷೆಗಳಿರುವ ಈ ಪ್ರದೇಶದಲ್ಲಿ ಸಹಬಾಳ್ವೆ, ಸೋದರತೆ ಕಾಯ್ದುಕೊಳ್ಳುವುದೂ ಮುಖ್ಯ’ ಎಂದರು.