<p><strong>ಕಾಸರಗೋಡು</strong>: ಬೆದ್ರಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಜಾತ್ರೆ, ಬಂಡಿ ಉತ್ಸವ ಮಾರ್ಚ್ 30ರಿಂದ ಏ.4ವರೆಗೆ ನಡೆಯಲಿದೆ.</p>.<p>ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ 31ರಂದು ಸಂಜೆ 6.30ಕ್ಕೆ ಯಕ್ಷಗಾನ, ಏ.1ರಂದು ಸಂಜೆ 7 ಗಂಟೆಗೆ ಸ್ಯಾಕ್ಸೊಫೋನ್ ವಾದನ, ರಾತ್ರಿ 8 ಗಂಟೆಗೆ ಕುಣಿತ ಭಜನೆ, 9 ಗಂಟೆಗೆ ನೃತ್ಯ ವೈವಿಧ್ಯ, ಏ.2ರಂದು ಮಧ್ಯಾಹ್ನ 1 ಗಂಟೆಗೆ ಪೂಮಾಣಿ ದೈವದ ನೇಮ, ಸಂಜೆ 7ರಿಂದ ಫ್ಯೂಷನ್ ತಿರುವಾದಿರ, ರಾತ್ರಿ 9ಕ್ಕೆ ಸಾಹಿತ್ಯ, ಗಾನ ನೃತ್ಯ ವೈಭವ, ಏ.3ರಂದು ಮಧ್ಯಾಹ್ನ 1 ಗಂಟೆಗೆ ಬೀರ್ಣಾಳ್ವ ದೈವದ ನೇಮ, 3.30ಕ್ಕೆ ಧೂಮಾವತಿ ದೈವದ ನೇಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.</p>.<p>23ರಿಂದ ನೇಮೋತ್ಸವ</p>.<p>ಕಾಸರಗೋಡು: ಮಂಜೇಶ್ವರ ಬಳಿಯ ಉದ್ಯಾವರ ಮಾಡ ಕೊಳಕೆ ನಾಗಬ್ರಹ್ಮ ಉಳ್ಳಾಳ್ತಿ ಕೋಮರಾಯ ಚಾಮುಂಡೇಶ್ವರಿ ದೈವಸ್ಥಾನದ ನೇಮೋತ್ಸವ ಮಾರ್ಚ್ 23, 24ರಂದು ನಡೆಯಲಿದೆ. ಪ್ರತಿದಿನ ವಿವಿಧ ದೈವಗಳ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p>ಶಿಲಾನ್ಯಾಸ</p>.<p>ಕಾಸರಗೋಡು: ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಸಂಬಂಧ ಶಿಲಾನ್ಯಾಸ ನಡೆಯಿತು.</p>.<p>ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ಶಾಲೆಯ ವ್ಯವಸ್ಥಾಪಕ ಗಣೇಶ್ ಭಟ್, ಕುಂಬಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಆನಂದ ಕೆ.ಮವ್ವಾರು, ಶ್ರೀಜಾ, ವಿಶ್ವನಾಥ ಬಳ್ಳಪದವು, ಸುನಿತಾ ರೈ, ರವೀಂದ್ರ ರೈ ಗೋಸಾಡ, ಸುಧಾಮ ಗೋಸಾಡ ಭಾಗವಹಿಸಿದ್ದರು.</p>.<p>22ರಿಂದ ಧರ್ಮಕೋಲ</p>.<p>ಕಾಸರಗೋಡು: ಕಾನತ್ತಿಲದ ಧೂಮಾವತಿ ದೈವದ ಧರ್ಮಕೋಲ ಮಾರ್ಚ್ 22, 23ರಂದು ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.</p>.<p>21ರಿಂದ ಕಾಲಾವಧಿ ನೇಮ</p>.<p>ಕಾಸರಗೋಡು: ಕುಂಬಳೆ ಆರಿಕ್ಕಾಡಿ ಧೂಮಾವತಿ ದೈವಸ್ಥಾನದಲ್ಲಿ ಕಾಲಾವಧಿ ನೇಮ ಮಾರ್ಚ್ 21, 22ರಂದು ನಡೆಯಲಿದೆ. ಪ್ರತಿದಿನ ವಿವಿಧ ದೈವಗಳ ನೇಮ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.</p>.<p>ಮನೆಗೆ ಬೆಂಕಿ</p>.<p>ಕಾಸರಗೋಡು: ನೆಲ್ಲಿಕಟ್ಟೆ ಬಳಿಯ ಪೈಕ ಚಂದ್ರಪಾರೆ ಎಂಬಲ್ಲಿನ ಶಾಫಿ ಎಂಬುವರ ಮನೆಗೆ ಬೆಂಕಿ ತಗುಲಿ ಹಾನಿಯಾಗಿದೆ.</p>.<p>ಅಡುಗೆ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ವಿದ್ಯುತ್ ಉಪಕರಣಗಳೂ ಭಸ್ಮವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಾಗಿ ಅವಘಡ ನಡೆದಿದೆ ಎಂದು ಶಂಕಿಸಲಾಗಿದೆ.</p>.<p>ಎಂಡಿಎಂಎ ಸಹಿತ ಬಂಧನ</p>.<p>ಕಾಸರಗೋಡು: ಉಪ್ಪಳ ರೈಲುನಿಲ್ದಾಣದ ಬಳಿ 7.6 ಗ್ರಾಂ ಎಂಡಿಎಂಎ ಸಹಿತ ಮಣಿಮುಂಡ ನಿವಾಸಿ ಮುಹಮ್ಮದ್ ಫಿರೋಝ್ (25) ಎಂಬಾತನನ್ನು, 4.65 ಗ್ರಾಂ ಎಂಡಿಎಂಎ ಸಹಿತ ಕುಂಜತ್ತೂರು ಪದವು ನಿವಾಸಿ ಆಲಂ ಇಕ್ಬಾಲ್ (25) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.</p>.<p>ರೈಲುಹಳಿಯಲ್ಲಿ ಶವ ಪತ್ತೆ</p>.<p>ಕಾಸರಗೋಡು: ಕಾಞಂಗಾಡು ರೈಲು ನಿಲ್ದಾಣ ಬಳಿಯ ಹಳಿಯಲ್ಲಿ ಮಾವುಂಗಾಲ್ ಪೇರಡ್ಕ ನಿವಾಸಿ ಜಮೀಶ್ ಫಿಲಿಪ್ (40) ಎಂಬುವರ ಶವ ಗುರುವಾರ ಪತ್ತೆಯಾಗಿದೆ.</p>.<p>ಕೊಲ್ಲಿರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಅವರು ಕಳೆದ ತಿಂಗಳು ಊರಿಗೆ ಬಂದಿದ್ದರು. ಹೊಸದುರ್ಗ ಪೊಲೀಸರು ಮಹಜರು ನಡೆಸಿ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು</strong>: ಬೆದ್ರಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಜಾತ್ರೆ, ಬಂಡಿ ಉತ್ಸವ ಮಾರ್ಚ್ 30ರಿಂದ ಏ.4ವರೆಗೆ ನಡೆಯಲಿದೆ.</p>.<p>ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ 31ರಂದು ಸಂಜೆ 6.30ಕ್ಕೆ ಯಕ್ಷಗಾನ, ಏ.1ರಂದು ಸಂಜೆ 7 ಗಂಟೆಗೆ ಸ್ಯಾಕ್ಸೊಫೋನ್ ವಾದನ, ರಾತ್ರಿ 8 ಗಂಟೆಗೆ ಕುಣಿತ ಭಜನೆ, 9 ಗಂಟೆಗೆ ನೃತ್ಯ ವೈವಿಧ್ಯ, ಏ.2ರಂದು ಮಧ್ಯಾಹ್ನ 1 ಗಂಟೆಗೆ ಪೂಮಾಣಿ ದೈವದ ನೇಮ, ಸಂಜೆ 7ರಿಂದ ಫ್ಯೂಷನ್ ತಿರುವಾದಿರ, ರಾತ್ರಿ 9ಕ್ಕೆ ಸಾಹಿತ್ಯ, ಗಾನ ನೃತ್ಯ ವೈಭವ, ಏ.3ರಂದು ಮಧ್ಯಾಹ್ನ 1 ಗಂಟೆಗೆ ಬೀರ್ಣಾಳ್ವ ದೈವದ ನೇಮ, 3.30ಕ್ಕೆ ಧೂಮಾವತಿ ದೈವದ ನೇಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.</p>.<p>23ರಿಂದ ನೇಮೋತ್ಸವ</p>.<p>ಕಾಸರಗೋಡು: ಮಂಜೇಶ್ವರ ಬಳಿಯ ಉದ್ಯಾವರ ಮಾಡ ಕೊಳಕೆ ನಾಗಬ್ರಹ್ಮ ಉಳ್ಳಾಳ್ತಿ ಕೋಮರಾಯ ಚಾಮುಂಡೇಶ್ವರಿ ದೈವಸ್ಥಾನದ ನೇಮೋತ್ಸವ ಮಾರ್ಚ್ 23, 24ರಂದು ನಡೆಯಲಿದೆ. ಪ್ರತಿದಿನ ವಿವಿಧ ದೈವಗಳ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p>ಶಿಲಾನ್ಯಾಸ</p>.<p>ಕಾಸರಗೋಡು: ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಸಂಬಂಧ ಶಿಲಾನ್ಯಾಸ ನಡೆಯಿತು.</p>.<p>ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ಶಾಲೆಯ ವ್ಯವಸ್ಥಾಪಕ ಗಣೇಶ್ ಭಟ್, ಕುಂಬಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಆನಂದ ಕೆ.ಮವ್ವಾರು, ಶ್ರೀಜಾ, ವಿಶ್ವನಾಥ ಬಳ್ಳಪದವು, ಸುನಿತಾ ರೈ, ರವೀಂದ್ರ ರೈ ಗೋಸಾಡ, ಸುಧಾಮ ಗೋಸಾಡ ಭಾಗವಹಿಸಿದ್ದರು.</p>.<p>22ರಿಂದ ಧರ್ಮಕೋಲ</p>.<p>ಕಾಸರಗೋಡು: ಕಾನತ್ತಿಲದ ಧೂಮಾವತಿ ದೈವದ ಧರ್ಮಕೋಲ ಮಾರ್ಚ್ 22, 23ರಂದು ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.</p>.<p>21ರಿಂದ ಕಾಲಾವಧಿ ನೇಮ</p>.<p>ಕಾಸರಗೋಡು: ಕುಂಬಳೆ ಆರಿಕ್ಕಾಡಿ ಧೂಮಾವತಿ ದೈವಸ್ಥಾನದಲ್ಲಿ ಕಾಲಾವಧಿ ನೇಮ ಮಾರ್ಚ್ 21, 22ರಂದು ನಡೆಯಲಿದೆ. ಪ್ರತಿದಿನ ವಿವಿಧ ದೈವಗಳ ನೇಮ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.</p>.<p>ಮನೆಗೆ ಬೆಂಕಿ</p>.<p>ಕಾಸರಗೋಡು: ನೆಲ್ಲಿಕಟ್ಟೆ ಬಳಿಯ ಪೈಕ ಚಂದ್ರಪಾರೆ ಎಂಬಲ್ಲಿನ ಶಾಫಿ ಎಂಬುವರ ಮನೆಗೆ ಬೆಂಕಿ ತಗುಲಿ ಹಾನಿಯಾಗಿದೆ.</p>.<p>ಅಡುಗೆ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ವಿದ್ಯುತ್ ಉಪಕರಣಗಳೂ ಭಸ್ಮವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಾಗಿ ಅವಘಡ ನಡೆದಿದೆ ಎಂದು ಶಂಕಿಸಲಾಗಿದೆ.</p>.<p>ಎಂಡಿಎಂಎ ಸಹಿತ ಬಂಧನ</p>.<p>ಕಾಸರಗೋಡು: ಉಪ್ಪಳ ರೈಲುನಿಲ್ದಾಣದ ಬಳಿ 7.6 ಗ್ರಾಂ ಎಂಡಿಎಂಎ ಸಹಿತ ಮಣಿಮುಂಡ ನಿವಾಸಿ ಮುಹಮ್ಮದ್ ಫಿರೋಝ್ (25) ಎಂಬಾತನನ್ನು, 4.65 ಗ್ರಾಂ ಎಂಡಿಎಂಎ ಸಹಿತ ಕುಂಜತ್ತೂರು ಪದವು ನಿವಾಸಿ ಆಲಂ ಇಕ್ಬಾಲ್ (25) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.</p>.<p>ರೈಲುಹಳಿಯಲ್ಲಿ ಶವ ಪತ್ತೆ</p>.<p>ಕಾಸರಗೋಡು: ಕಾಞಂಗಾಡು ರೈಲು ನಿಲ್ದಾಣ ಬಳಿಯ ಹಳಿಯಲ್ಲಿ ಮಾವುಂಗಾಲ್ ಪೇರಡ್ಕ ನಿವಾಸಿ ಜಮೀಶ್ ಫಿಲಿಪ್ (40) ಎಂಬುವರ ಶವ ಗುರುವಾರ ಪತ್ತೆಯಾಗಿದೆ.</p>.<p>ಕೊಲ್ಲಿರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಅವರು ಕಳೆದ ತಿಂಗಳು ಊರಿಗೆ ಬಂದಿದ್ದರು. ಹೊಸದುರ್ಗ ಪೊಲೀಸರು ಮಹಜರು ನಡೆಸಿ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>