ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರು ಬ್ಲಾಕ್ ಕಾಂಗ್ರೆಸ್ ಘಟಕಗಳಿಗೆ ಅಧ್ಯಕ್ಷರ ಅಧಿಕೃತ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ ಎಂದು ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.
ಪಿ.ಸಿ.ಜಯರಾಮ್ (ಸುಳ್ಯ), ಸುಧೀರ್ ಕುಮಾರ್ ಶೆಟ್ಟಿ (ಕಡಬ), ಪ್ರಕಾಶ್ ಬಿ. ಸಾಲಿಯಾನ್ (ಮಂಗಳೂರು ನಗರ), ಕೆ.ಶೈಲೇಶ್ ಕುಮಾರ್ (ಬೆಳ್ತಂಗಡಿ ನಗರ), ರಂಜನ್ ಜಿ. ಗೌಡ (ಬೆಳ್ತಂಗಡಿ ಗ್ರಾಮೀಣ), ಡಾ.ರಾಜಾರಾಮ್ ಕೆ.ಬಿ. (ವಿಟ್ಲ–ಉಪ್ಪಿನಂಗಡಿ).