‘ದೋಣಿ ಕಟ್ಟುವ ಹಾಗೂ ರಿಪೇರಿ ಮಾಡುವ ಕೆಲಸಕ್ಕಾಗಿ ಬಂದಿದ್ದ ಅವರು, ತಣ್ಣೀರುಬಾವಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳದಲ್ಲಿ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ವಾಸವಿದ್ದರು. ಶನಿವಾರ ಸಂಜೆ ಅವರ ನಡುವೆ ಜಗಳ ನಡೆದಿತ್ತು ಬಿನೋಯ್ ತನ್ನ ಕೊಠಡಿಯಲ್ಲಿ ಮಲಗಿದ್ದಾಗ ಪಾನಮತ್ತನಾಗಿದ್ದ ಬಿನು ಆತನಿಗೆ ಮಾರಕಾಯುಧದಿಂದ ಇರಿದಿದ್ದ. ಬಿನೋಯ್ ದೇಹದಲ್ಲಿ ಒಂದು ಇರಿತದ ಗಾಯವಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.