ಮಂಗಳೂರು: ಉಚ್ಚಿಲ ಸೋಮೇಶ್ವರದಲ್ಲಿ ಮಂಗಳವಾರ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿತ್ತು. ಕಾರಿನೊಳಗೆ ಬಂಧಿಯಾಗಿದ್ದ ಚಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ನಿರಂತರ ಮಳೆಯ ಪರಿಣಾಮ ಉಳ್ಳಾಲ ತಾಲ್ಲೂಕಿನ ಉಚ್ಚಿಲಗುಡ್ಡೆ ಅಂಗನವಾಡಿಗೆ ನೀರು ನುಗ್ಗಿದೆ. ಅಂಗನವಾಡಿ ಒಳಗಿದ್ದ ದಾಖಲೆಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು.