ಸ್ಥಳೀಯ ನಿವಾಸಿ, ಕೂಲಿಕಾರ್ಮಿಕ, ಬಾಲಕೃಷ್ಣ-ಸುಮಲತಾ ದಂಪತಿ ಪುತ್ರ ಶಿವಕೃಷ್ಣ (ಒಂದೂ ಮುಕ್ಕಾಲು ವರ್ಷ) ಮೃತಪಟ್ಟ ಮಗು. ಮಂಚದಲ್ಲಿ ಕುಳಿತಿದ್ದ ಮಗು ಕುಸಿದು ಬಿದ್ದ ವೇಳೆ ಮನೆಮಂದಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಮಗು ಮೃತಪಟ್ಟಿತ್ತು. ಶ್ವಾಸನಾಳದಲ್ಲಿ ಆಹಾರ ಸಿಲುಕಿಕೊಂಡಿದ್ದರಿಂದ ಮಗು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಬೇಕಲ ಪೊಲೀಸರು ಮಹಜರು ನಡೆಸಿದ್ದಾರೆ.