ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು,‘ಜಾರ್ಜ್ ಫರ್ನಾಂಡಿಸ್ ಅವರು 1930ರ ಜೂನ್ 3ರಂದು ನಗರದ ಬಿಜೈನಲ್ಲಿ ಜಾನ್ ಜೋಸೆಫ್ ಫರ್ನಾಂಡಿಸ್– ಆಲಿಸ್ ಮಾರ್ಥಾ ಫರ್ನಾಂಡಿಸ್ ದಂಪತಿಯ ಹಿರಿಯ ಮಗನಾಗಿ ಜನಿಸಿದ್ದರು. 1961- 68ರವರೆಗೆ ಮುಂಬೈ ಮಹಾನಗರ ಪಾಲಿಕೆ ಸದಸ್ಯರಾಗಿದ್ದರು. ದಲಿತರ ಮತ್ತು ದುರ್ಬಲವರ್ಗದವರ ಧ್ವನಿಯಾಗಿ ಹೊರಹೊಮ್ಮಿದ್ದರು. ಬಳಿಕ ಲೋಕಸಭಾ ಸದಸ್ಯರಾದರು. 1974ರಲ್ಲಿ ರೈಲ್ವೆ ಕಾರ್ಮಿಕರ ಮುಷ್ಕರದ ಮುಂದಾಳತ್ವ ವಹಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದರು. ಅವರು ರೈಲ್ವೆ ಸಚಿವರಾಗಿದ್ದಾಗ ಕೊಂಕಣ ರೈಲ್ವೆ ಯೋಜನೆ ಜಾರಿಯಾಗಿದೆ’ ಎಂದರು.