ಎಲ್ಲಾ ಹಂತಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದ್ದು, ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಮಾಧ್ಯಮ, ಜನ ಆಡಿಕೊಳ್ಳುತ್ತಿರುವಂತೆ ಸಿಎಂ ಸ್ಥಾನಕ್ಕೆ ₹ 2,500 ಕೋಟಿ, ಸಚಿವ ಸ್ಥಾನಕ್ಕೆ ₹ 100 ಕೋಟಿ, ಪೊಲೀಸ್ ನೇಮಕಾತಿ ಸೇರಿದಂತೆ ಹೋಟೆಲ್ ಮೆನುಕಾರ್ಡ್ ರೀತಿಯಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರ ಸಾಗಿದೆ. ಲೂಟಿಕೋರರ ಸರ್ಕಾರದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಹೇಳಿದರು.