ಪಂಜೆ ಮಂಗೇಶರಾಯರ ವಿಚಾರ, ಶಿವಾನಂದ ಕಳವೆ ಸೇರಿದಂತೆ ಹಲವು ಪ್ರಮುಖರ ವಿಷಯಗಳು ಹತ್ತನೆಯ ತರಗತಿ ಪಠ್ಯದಲ್ಲಿ ಬರಲಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರವೇ ಪಠ್ಯಕ್ರಮ ಸಿದ್ಧವಾಗಲಿದೆ. ನಿಜವಾದ ಇತಿಹಾಸವನ್ನು ಪಠ್ಯದಲ್ಲಿ ಅಳವಡಿಸುವ ಪ್ರಯತ್ನವನ್ನು ಪಠ್ಯ ರಚನಾ ಸಮಿತಿ ಮಾಡಿದೆ ಎಂದು ಸುದರ್ಶನ್ ಹೇಳಿದರು. ಪ್ರಮುಖರಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ ಮಿಜಾರು, ಜಗದೀಶ ಶೇಣವ ಇದ್ದರು.