‘ತೌತೆ ಚಂಡಮಾರುತದಿಂದ ಆದ ಹಾನಿ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಎಲ್ಲ ಸರಿಪಡಿಸುವುದಾಗಿ ಭರವಸೆ ನೀಡಿ ಹೋಗಿದ್ದರು. ಆದರೆ,
ಸಮಸ್ಯೆ ಪರಿಹಾರವಾಗಿಲ್ಲ. ಈಗ ಏಕಾಏಕಿ ಮೀನುಗಾರರು ಸ್ಥಳ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ಸ್ಥಳೀಯವಾಗಿ ಪರ್ಯಾಯ ವ್ಯವಸ್ಥೆ
ಕಲ್ಪಿಸಬೇಕು ಅಥವಾ ರೆಸಾರ್ಟ್ಗಳನ್ನು ಖಾಲಿ ಮಾಡಿ ಅದನ್ನು ಮೀನುಗಾರರಿಗೆ ನೀಡಬೇಕು. ಮೀನುಗಾರಿಕೆ ಕಸಬು ಮಾಡಿಕೊಂಡಿರುವಾಗ ದೂರದ ಗುಡ್ಡ ಪ್ರದೇಶದಲ್ಲಿ ಜಾಗ ಕೊಟ್ಟರೆ ಸರಿಯಲ್ಲ. ಈಗಾಗಲೇ ಮೀನುಗಾರರ 70 ಸೆಂಟ್ಸ್ನಷ್ಟು ಜಾಗ ಸಮುದ್ರದ ಪಾಲಾಗಿದೆ. ಇರುವ 5 ಸೆಂಟ್ಸ್ ಸ್ಥಳವನ್ನು ಬಿಟ್ಟು ಕೊಡಲು ನೋಟಿಸ್ ನೀಡಿರುವ ಕ್ರಮ ಸರಿಯಲ್ಲ’ ಎಂದು ಆರೋಪಿಸಿದರು.