ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ವೇಣೂರಿನ ವ್ಯಕ್ತಿಯೊಬ್ಬರು (45 ವರ್ಷ) ಮೃತಪಟ್ಟಿದ್ದು, ಕೋವಿಡ್-19 ಸೋಂಕು ಕಾರಣ ಎನ್ನಲಾಗಿದೆ.
ಹೃದಯದ ಕಾಯಿಲೆಗೆ ಸಂಬಂಧಿಸಿ ಚಿಕಿತ್ಸೆಗೆಂದು ಇವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಮೃತಪಟ್ಟಿದ್ದಾರೆ. ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ.