<p><strong>ಮಂಗಳೂರು:</strong> ಎಡಪದವು ಪೂಪಾಡಿಕಲ್ಲು ಎಂಬಲ್ಲಿ ರಸ್ತೆ ಬದಿಯಲ್ಲಿ ಚರ್ಮುರಿ ಮಾರುತ್ತಿದ್ದ ಕಡೆಗೆ ಬಂದು, ಅಲ್ಲಿದ್ದ ಸಾಮಗ್ರಿಯನ್ನು ತಿಂದ ದನಕ್ಕೆ ಈರುಳ್ಳಿ ಕೊಚ್ಚಲು ಬಳಸುವ ಚಾಕುವಿನಿಂದ ಭಾನುವಾರ ಹಲ್ಲೆ ನಡೆಸಲಾಗಿದೆ. </p>.<p>‘ಮುಸ್ಲಿಂ ಚರ್ಮುರಿ ವ್ಯಾಪಾರಿಯೊಬ್ಬರು ಹಿಂದೂ ಮಾಲಾಧಾರಿಗಳಿಗೆ ರಸ್ತೆ ಬದಿ ಚರ್ಮುರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ದನವೊಂದು ಆ ಸ್ಥಳದತ್ತ ನುಗ್ಗಿ ಅಲ್ಲಿದ್ದ ಸಾಮಗ್ರಿ ತಿನ್ನಲಾರಂಭಿಸಿತ್ತು. ಅದನ್ನು ಓಡಿಸಿಕೊಂಡು ಹೋಗಿದ್ದ ವ್ಯಾಪಾರಿ ಈರುಳ್ಳಿ ಕೊಚ್ಚಲು ಇಟ್ಟುಕೊಂಡಿದ್ದ ಚಾಕುವಿನಿಂದ ದನದ ಮೇಲೆ ಹಲ್ಲೆ ಮಾಡಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.</p>.<p>‘ಮುಸ್ಲಿಂ ಚರ್ಮುರಿ ಅಂಗಡಿಯಲ್ಲಿ ಹಿಂದೂ ಮಾಲಾಧಾರಿಗಳು ಚರ್ಮುರಿ ತಿನ್ನುವುದು ಸಕಾರಾತ್ಮಕ ಸಂಕೇತ. ದನದ ಮೇಲೆ ಅಚಾನಕ್ ಆಗಿ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಯಾರೂ ದೂರು ನೀಡಿಲ್ಲ. ಸಾಕುದನದ ಬಗ್ಗೆ ಕಾಳಜಿ ವಹಿಸುವುದು ಅದರ ಮಾಲೀಕರ ಜವಾಬ್ದಾರಿ. ದನವನ್ನು ಗಾಯಗೊಳಿಸಿ ಹಿಂಸಿಸಿದ್ದಕ್ಕೆ ದಂಡ ವಿಧಿಸಲು ಅವಕಾಶ ಇದೆ’ ಎಂದು ಕಮಿಷನರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಎಡಪದವು ಪೂಪಾಡಿಕಲ್ಲು ಎಂಬಲ್ಲಿ ರಸ್ತೆ ಬದಿಯಲ್ಲಿ ಚರ್ಮುರಿ ಮಾರುತ್ತಿದ್ದ ಕಡೆಗೆ ಬಂದು, ಅಲ್ಲಿದ್ದ ಸಾಮಗ್ರಿಯನ್ನು ತಿಂದ ದನಕ್ಕೆ ಈರುಳ್ಳಿ ಕೊಚ್ಚಲು ಬಳಸುವ ಚಾಕುವಿನಿಂದ ಭಾನುವಾರ ಹಲ್ಲೆ ನಡೆಸಲಾಗಿದೆ. </p>.<p>‘ಮುಸ್ಲಿಂ ಚರ್ಮುರಿ ವ್ಯಾಪಾರಿಯೊಬ್ಬರು ಹಿಂದೂ ಮಾಲಾಧಾರಿಗಳಿಗೆ ರಸ್ತೆ ಬದಿ ಚರ್ಮುರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ದನವೊಂದು ಆ ಸ್ಥಳದತ್ತ ನುಗ್ಗಿ ಅಲ್ಲಿದ್ದ ಸಾಮಗ್ರಿ ತಿನ್ನಲಾರಂಭಿಸಿತ್ತು. ಅದನ್ನು ಓಡಿಸಿಕೊಂಡು ಹೋಗಿದ್ದ ವ್ಯಾಪಾರಿ ಈರುಳ್ಳಿ ಕೊಚ್ಚಲು ಇಟ್ಟುಕೊಂಡಿದ್ದ ಚಾಕುವಿನಿಂದ ದನದ ಮೇಲೆ ಹಲ್ಲೆ ಮಾಡಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.</p>.<p>‘ಮುಸ್ಲಿಂ ಚರ್ಮುರಿ ಅಂಗಡಿಯಲ್ಲಿ ಹಿಂದೂ ಮಾಲಾಧಾರಿಗಳು ಚರ್ಮುರಿ ತಿನ್ನುವುದು ಸಕಾರಾತ್ಮಕ ಸಂಕೇತ. ದನದ ಮೇಲೆ ಅಚಾನಕ್ ಆಗಿ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಯಾರೂ ದೂರು ನೀಡಿಲ್ಲ. ಸಾಕುದನದ ಬಗ್ಗೆ ಕಾಳಜಿ ವಹಿಸುವುದು ಅದರ ಮಾಲೀಕರ ಜವಾಬ್ದಾರಿ. ದನವನ್ನು ಗಾಯಗೊಳಿಸಿ ಹಿಂಸಿಸಿದ್ದಕ್ಕೆ ದಂಡ ವಿಧಿಸಲು ಅವಕಾಶ ಇದೆ’ ಎಂದು ಕಮಿಷನರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>