ಉಳ್ಳಾಲ: ಸಿಪಿಎಂ ಮುಖಂಡ ತಲಪಾಡಿ ನಾರ್ಲ ನಿವಾಸಿ ನಾರಾಯಣ ತಲಪಾಡಿ (68) ಹೃದಯಾಘಾತದಿಂದ ಮಂಗಳವಾರ ನಿಧನರಾದರು. ಪಕ್ಷದ ಚಟುವಟಿಕೆ ನಿಮಿತ್ತ ಉಪ್ಪಳದ ಮುಖಂಡರೊಬ್ಬರ ಮನೆಗೆ ತೆರಳಿದ್ದ ಅವರು ವಾಪಸಾಗುವಾಗ ಹೃದಯಾಘಾತ ಉಂಟಾಗಿದೆ.
ಸಿಪಿಎಂ, ದಲಿತ ಹಕ್ಕುಗಳ ಹೋರಾಟ, ಬೀಡಿ ಲೇಬರ್ ಯೂನಿಯನ್, ಕೆಪಿಆರ್ಎಸ್ ರೈತ ಸಂಘ, ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ತೊಡಗಿಸಿಕೊಂಡಿದ್ದರು. ತಲಪಾಡಿ ಭಾಗದಲ್ಲಿ ಕೊರಗಜ್ಜನ ಪಾತ್ರಿಯಾಗಿಯೂ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.