<p><strong>ಮಂಗಳೂರು:</strong> ಕರ್ಫ್ಯೂ ವಿಧಿಸಿರುವುದರ ಪರಿವೇ ಇಲ್ಲದೇ ಶುಕ್ರವಾರ ಸುಮಾರು 300 ಟನ್ನಷ್ಟು ಮೀನು ಹೊತ್ತು ಬಂದಿದ್ದ ಮೀನುಗಾರಿಕೆ ಬೋಟ್ಗಳ ಮಾಲೀಕರ ಆತಂಕ ಶನಿವಾರ ನಿವಾರಣೆ ಆಯಿತು. ಶನಿವಾರ ಮಧ್ಯಾಹ್ನ 3 ಗಂಟೆ ಕರ್ಫ್ಯೂ ಸಡಿಲಿಕೆ ಮಾಡಿದ್ದರಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಖರೀದಿಯೂ ನಡೆಯಿತು. ಜತೆಗೆ ಬೇರೆ ಕಡೆಗಳಿಗೆ ಮೀನಿನ ಸಾಗಣೆಯೂ ಆಯಿತು.</p>.<p>ಸ್ಟೇಟ್ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಮಧ್ಯಾಹ್ನ ಮೀನು ಮಾರಾಟವು ಅಬ್ಬರದಿಂದ ಕೂಡಿತ್ತು. ಎರಡು ದಿನಗಳಿಂದ ಮಾರಾಟವಾಗದೇ ಐಸ್ನಲ್ಲಿ ಇಟ್ಟಿದ್ದ ಮೀನುಗಳನ್ನು ಮಾರಾಟ ಮಾಡಲಾಯಿತು. ಅದಾಗ್ಯೂ ಮೀನುಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಈ ಮಧ್ಯೆ ಗ್ರಾಹಕರೂ ಬೆಲೆಗೆ ಗಮನ ಕೊಡದೇ, ಸಿಕ್ಕಷ್ಟು ಮೀನನ್ನು ಖರೀದಿಸಿ ಮನೆಯತ್ತ ತೆರಳಿದರು.</p>.<p>ಶನಿವಾರ ಸಂಜೆಯ ವೇಳೆಗೆ ಕರ್ಫ್ಯೂ ತೆಗೆದು ಹಾಕದಿದ್ದರೆ ಹಿಡಿದಿರುವ ಸುಮಾರು 300 ಟನ್ನಷ್ಟು ಮೀನು ಕೊಳೆಯಲು ಪ್ರಾರಂಭವಾಗುತ್ತಿತ್ತು ಎಂದು ಪರ್ಸೀನ್ ಬೋಟ್ ಮಾಲೀಕರ ಸಂಘದ ಗೌರವಾಧ್ಯಕ್ಷ ಉಮೇಶ್ ಕರ್ಕೇರ ತಿಳಿಸಿದರು.</p>.<p>ಬಂದ್ ಹಾಗೂ ಕರ್ಫ್ಯೂ ಕಾರಣದಿಂದಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾದರೆ, ಅತಿ ಹೆಚ್ಚು ಸಮಸ್ಯೆಗೆ ಸಿಲುಕುವವರು ಮೀನುಗಾರರೇ. ಐದರಿಂದ ಆರು ಪರ್ಸೀನ್ ಬೋಟ್ಗಳು ಮತ್ತು ಸುಮಾರು 50 ಟ್ರಾಲರ್ ಬೋಟ್ಗಳು ಆಳ ಸಮುದ್ರ ಮೀನುಗಾರಿಕೆಯಿಂದ ಶುಕ್ರವಾರ ಬಂದರಿಗೆ ಮರಳಿದ್ದವು. ಈ ದೋಣಿಗಳನ್ನು ವಾಪಸ್ ಕಳುಹಿಸಿ, ಶನಿವಾರ ಮತ್ತೆ ಹಿಂತಿರುಗಲು ಹೇಳಲಾಗಿತ್ತು ಎಂದು ಕರ್ಕೇರ ತಿಳಿಸಿದರು.</p>.<p>ವಿಧಿಸಿದ್ದರಿಂದ ಮೀನಿನ ಶೇಖರಣೆಗೆ ಬೇಕಾಗುವಷ್ಟು ಮಂಜುಗಡ್ಡೆಯೂ ಬಂದರಿಗೆ ಸರಬರಾಜು ಆಗಿರಲಿಲ್ಲ. ಆದರೆ ಶನಿವಾರದವರೆಗೆ ಮೀನುಗಳು ಹಾಳಾಗದಂತೆ ತಡೆಯಲು ದೋಣಿಗಳಲ್ಲಿ ಮಂಜುಗಡ್ಡೆಯ ಸಂಗ್ರಹವಿತ್ತು. ಹೀಗಾಗಿ ಬೋಟ್ಗಳನ್ನು ಶನಿವಾರ ಮರಳುವಂತೆ ಹೇಳಿ ಕಳುಹಿಸಲಾಗಿತ್ತು.</p>.<p>ಕರ್ಫ್ಯೂನಿಂದ ಮೀನುಗಾರಿಕಾ ಸಮುದಾಯವು ಹೆಚ್ಚಿನ ಪ್ರಮಾಣದಲ್ಲಿ ತೊಂದರೆ ಅನುಭವಿಸುವಂತಾಗಿದೆ. ಬಂದರನ್ನು ಅವಲಂಬಿಸಿ ನೇರವಾಗಿ ಅಥವಾ ಪರೋಕ್ಷವಾಗಿ ಸುಮಾರು 5 ಸಾವಿರ ಜನರು ಜೀವನ ನಡೆಸುತ್ತಿದ್ದು, ಅವರೆಲ್ಲ ಕೆಲಸವಿಲ್ಲದೇ ಮನೆಯೊಳಗೆ ಇರುವಂತಾಗಿತ್ತು ಎಂದು ಅವರು ವಿವರಿಸಿದರು.</p>.<p><strong>ಮೀನುಗಾರರು ನಿರಾಳ</strong></p>.<p>ಶನಿವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಮೀನುಗಾರರ ನಿಯೋಗ, ವಸ್ತು ಸ್ಥಿತಿಯನ್ನು ವಿವರಿಸಿ, ಕರ್ಫ್ಯೂ ಸಡಿಲಿಸುವಂತೆ ಮನವಿ ಮಾಡಿತು.</p>.<p>ಶಾಸಕ ಡಿ.ವೇದವ್ಯಾಸ ಕಾಮತ್ ಅವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಿತಿನ್ಕುಮಾರ್ ನೇತೃತ್ವದ ನಿಯೋಗ, ಈಗಾಗಲೇ ಬೋಟ್ಗಳು ಮೀನು ಹೊತ್ತು ಬಂದರಿಗೆ ಬಂದಿದ್ದು, ಕರ್ಫ್ಯೂ ಹಿಂದಕ್ಕೆ ಪಡೆಯಲಿದ್ದರೆ, ಕೋಟ್ಯಂತರ ನಷ್ಟ ಅನುಭವಿಸುವಂತಾಗಲಿದೆ ಎಂದು ತಿಳಿಸಿತು.</p>.<p>ಶನಿವಾರ ಮಧ್ಯಾಹ್ನ ಕರ್ಫ್ಯೂ ಸಡಿಲಿಸಿದ್ದರೂ, 3 ಗಂಟೆಯಲ್ಲಿ ಬಂದರಿನಿಂದ ಮೀನನ್ನು ಎತ್ತಿ, ಹೊರಗೆ ಸಾಗಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಭಾನುವಾರವೂ ಕರ್ಫ್ಯೂ ಸಡಿಲಿಸುವಂತೆ ವಿನಂತಿಸಿತ್ತು. ಇದೀಗ ಭಾನುವಾರ ಕರ್ಫ್ಯೂ ಸಡಿಲಿಸಿರುವುದರಿಂದ ಮೀನುಗಾರರು ನಿರಾಳ ಆಗುವಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕರ್ಫ್ಯೂ ವಿಧಿಸಿರುವುದರ ಪರಿವೇ ಇಲ್ಲದೇ ಶುಕ್ರವಾರ ಸುಮಾರು 300 ಟನ್ನಷ್ಟು ಮೀನು ಹೊತ್ತು ಬಂದಿದ್ದ ಮೀನುಗಾರಿಕೆ ಬೋಟ್ಗಳ ಮಾಲೀಕರ ಆತಂಕ ಶನಿವಾರ ನಿವಾರಣೆ ಆಯಿತು. ಶನಿವಾರ ಮಧ್ಯಾಹ್ನ 3 ಗಂಟೆ ಕರ್ಫ್ಯೂ ಸಡಿಲಿಕೆ ಮಾಡಿದ್ದರಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಖರೀದಿಯೂ ನಡೆಯಿತು. ಜತೆಗೆ ಬೇರೆ ಕಡೆಗಳಿಗೆ ಮೀನಿನ ಸಾಗಣೆಯೂ ಆಯಿತು.</p>.<p>ಸ್ಟೇಟ್ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಮಧ್ಯಾಹ್ನ ಮೀನು ಮಾರಾಟವು ಅಬ್ಬರದಿಂದ ಕೂಡಿತ್ತು. ಎರಡು ದಿನಗಳಿಂದ ಮಾರಾಟವಾಗದೇ ಐಸ್ನಲ್ಲಿ ಇಟ್ಟಿದ್ದ ಮೀನುಗಳನ್ನು ಮಾರಾಟ ಮಾಡಲಾಯಿತು. ಅದಾಗ್ಯೂ ಮೀನುಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಈ ಮಧ್ಯೆ ಗ್ರಾಹಕರೂ ಬೆಲೆಗೆ ಗಮನ ಕೊಡದೇ, ಸಿಕ್ಕಷ್ಟು ಮೀನನ್ನು ಖರೀದಿಸಿ ಮನೆಯತ್ತ ತೆರಳಿದರು.</p>.<p>ಶನಿವಾರ ಸಂಜೆಯ ವೇಳೆಗೆ ಕರ್ಫ್ಯೂ ತೆಗೆದು ಹಾಕದಿದ್ದರೆ ಹಿಡಿದಿರುವ ಸುಮಾರು 300 ಟನ್ನಷ್ಟು ಮೀನು ಕೊಳೆಯಲು ಪ್ರಾರಂಭವಾಗುತ್ತಿತ್ತು ಎಂದು ಪರ್ಸೀನ್ ಬೋಟ್ ಮಾಲೀಕರ ಸಂಘದ ಗೌರವಾಧ್ಯಕ್ಷ ಉಮೇಶ್ ಕರ್ಕೇರ ತಿಳಿಸಿದರು.</p>.<p>ಬಂದ್ ಹಾಗೂ ಕರ್ಫ್ಯೂ ಕಾರಣದಿಂದಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾದರೆ, ಅತಿ ಹೆಚ್ಚು ಸಮಸ್ಯೆಗೆ ಸಿಲುಕುವವರು ಮೀನುಗಾರರೇ. ಐದರಿಂದ ಆರು ಪರ್ಸೀನ್ ಬೋಟ್ಗಳು ಮತ್ತು ಸುಮಾರು 50 ಟ್ರಾಲರ್ ಬೋಟ್ಗಳು ಆಳ ಸಮುದ್ರ ಮೀನುಗಾರಿಕೆಯಿಂದ ಶುಕ್ರವಾರ ಬಂದರಿಗೆ ಮರಳಿದ್ದವು. ಈ ದೋಣಿಗಳನ್ನು ವಾಪಸ್ ಕಳುಹಿಸಿ, ಶನಿವಾರ ಮತ್ತೆ ಹಿಂತಿರುಗಲು ಹೇಳಲಾಗಿತ್ತು ಎಂದು ಕರ್ಕೇರ ತಿಳಿಸಿದರು.</p>.<p>ವಿಧಿಸಿದ್ದರಿಂದ ಮೀನಿನ ಶೇಖರಣೆಗೆ ಬೇಕಾಗುವಷ್ಟು ಮಂಜುಗಡ್ಡೆಯೂ ಬಂದರಿಗೆ ಸರಬರಾಜು ಆಗಿರಲಿಲ್ಲ. ಆದರೆ ಶನಿವಾರದವರೆಗೆ ಮೀನುಗಳು ಹಾಳಾಗದಂತೆ ತಡೆಯಲು ದೋಣಿಗಳಲ್ಲಿ ಮಂಜುಗಡ್ಡೆಯ ಸಂಗ್ರಹವಿತ್ತು. ಹೀಗಾಗಿ ಬೋಟ್ಗಳನ್ನು ಶನಿವಾರ ಮರಳುವಂತೆ ಹೇಳಿ ಕಳುಹಿಸಲಾಗಿತ್ತು.</p>.<p>ಕರ್ಫ್ಯೂನಿಂದ ಮೀನುಗಾರಿಕಾ ಸಮುದಾಯವು ಹೆಚ್ಚಿನ ಪ್ರಮಾಣದಲ್ಲಿ ತೊಂದರೆ ಅನುಭವಿಸುವಂತಾಗಿದೆ. ಬಂದರನ್ನು ಅವಲಂಬಿಸಿ ನೇರವಾಗಿ ಅಥವಾ ಪರೋಕ್ಷವಾಗಿ ಸುಮಾರು 5 ಸಾವಿರ ಜನರು ಜೀವನ ನಡೆಸುತ್ತಿದ್ದು, ಅವರೆಲ್ಲ ಕೆಲಸವಿಲ್ಲದೇ ಮನೆಯೊಳಗೆ ಇರುವಂತಾಗಿತ್ತು ಎಂದು ಅವರು ವಿವರಿಸಿದರು.</p>.<p><strong>ಮೀನುಗಾರರು ನಿರಾಳ</strong></p>.<p>ಶನಿವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಮೀನುಗಾರರ ನಿಯೋಗ, ವಸ್ತು ಸ್ಥಿತಿಯನ್ನು ವಿವರಿಸಿ, ಕರ್ಫ್ಯೂ ಸಡಿಲಿಸುವಂತೆ ಮನವಿ ಮಾಡಿತು.</p>.<p>ಶಾಸಕ ಡಿ.ವೇದವ್ಯಾಸ ಕಾಮತ್ ಅವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಿತಿನ್ಕುಮಾರ್ ನೇತೃತ್ವದ ನಿಯೋಗ, ಈಗಾಗಲೇ ಬೋಟ್ಗಳು ಮೀನು ಹೊತ್ತು ಬಂದರಿಗೆ ಬಂದಿದ್ದು, ಕರ್ಫ್ಯೂ ಹಿಂದಕ್ಕೆ ಪಡೆಯಲಿದ್ದರೆ, ಕೋಟ್ಯಂತರ ನಷ್ಟ ಅನುಭವಿಸುವಂತಾಗಲಿದೆ ಎಂದು ತಿಳಿಸಿತು.</p>.<p>ಶನಿವಾರ ಮಧ್ಯಾಹ್ನ ಕರ್ಫ್ಯೂ ಸಡಿಲಿಸಿದ್ದರೂ, 3 ಗಂಟೆಯಲ್ಲಿ ಬಂದರಿನಿಂದ ಮೀನನ್ನು ಎತ್ತಿ, ಹೊರಗೆ ಸಾಗಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಭಾನುವಾರವೂ ಕರ್ಫ್ಯೂ ಸಡಿಲಿಸುವಂತೆ ವಿನಂತಿಸಿತ್ತು. ಇದೀಗ ಭಾನುವಾರ ಕರ್ಫ್ಯೂ ಸಡಿಲಿಸಿರುವುದರಿಂದ ಮೀನುಗಾರರು ನಿರಾಳ ಆಗುವಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>