ತಾಲ್ಲೂಕು ಕಚೇರಿಗೆ ಭೇಟಿನೀಡಿ ತಹಶೀಲ್ದಾರ್ ಪುರಂದರಕೆ ಅವರೊಂದಿಗೆ ಸಮಾಲೋಚನೆನಡೆಸಿದರು. ಹೆಬ್ರಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ, ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಚರ್ಚಿಸಿದರು. ಆಮ್ಲಜನಕ ಉತ್ಪಾದನಾ ಕೇಂದ್ರ, ಜನರೇಟರ್ ಕೊಠಡಿ, ಆಂಬುಲೆನ್ಸ್, ಗಂಟಲು ದ್ರವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ಹೊಸ ಆಂಬುಲೆನ್ಸ್ ನೋಂದಣಿ ವಿಳಂಬವಾಗಿದ್ದಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿದರು. ನೋಂದಣಿ ಪ್ರಕ್ರಿಯೆಯನ್ನು ಶೀಘ್ರ ಮಾಡಲಾಗುವುದು ಜಿ. ಜಗದೀಶ್ ತಿಳಿಸಿದರು.