ಮಂಗಳೂರು: ‘ಬುಧವಾರ ಬೆಳಿಗ್ಗೆ ನಗರದ ಮೀನು ಮಾರುಕಟ್ಟೆಗೆ ಭೇಟಿ ನೀಡಿದಾಗ ಅರ್ಧ ಗಂಟೆಯಲ್ಲಿ 8 ಮಂದಿ ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ್ದೇವೆ. 2 ವರ್ಷಗಳಲ್ಲಿ ಕೇವಲ ಇಬ್ಬರು ಬಾಲ ಕಾರ್ಮಿಕರನ್ನು ಪತ್ತೆ ಮಾಡಿರುವುದು ಅನುಮಾನ ಮೂಡಿಸುತ್ತದೆ. ಇಬ್ಬರನ್ನು ಪತ್ತೆ ಹಚ್ಚಲು ಕಾರ್ಮಿಕ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ವರ್ಷವಿಡೀ ಸರ್ಕಾರಿ ವೇತನ ಕೊಡಬೇಕೇ’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಅಂತೋನಿ ಸೆಬಾಸ್ಟಿಯನ್ ಖಾರವಾಗಿ ಪ್ರಶ್ನಿಸಿದರು.