ಉಜಿರೆ: ಧರ್ಮಸ್ಥಳದ ರತ್ನಗಿರಿಯಲ್ಲಿ ಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ಶನಿವಾರ ಬೆಳಿಗ್ಗೆ 8.45ರ ಮೀನ ಲಗ್ನದಲ್ಲಿ ಆರಂಭವಾಯಿತು.
ಆರಂಭದಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಜಲಾಭಿಷೇಕ ನಡೆಯಿತು. ದಿವ್ಯ, ಜನಮಂಗಳ, ಶ್ರದ್ಧಾ ಕಲಶಗಳಿಂದ ಬಾಹುಬಲಿಗೆ ಅಭಿಷೇಕ ಪೂರ್ಣವಾಯಿತು.
ಜಲಾಭಿಷೇಕ ಮುಗಿದು ದ್ರವ್ಯಾಭಿಷೇಕ ನಡೆಯುತ್ತಿದೆ.ಮೊದಲಿಗೆ ಎಳನೀರು ಅಭಿಷೇಕ ನಡೆಯಿತು. ರತ್ನಗಿರಿಯಲ್ಲಿಮಂಗಳ ಜಯಘೋಷ, ಭಜನೆ, ಕೀರ್ತನೆಗಳ ನಾದ ಮೊಳಗುತ್ತಿದೆ. ಸಾವಿರಾರು ಭಕ್ತರು ಅಭಿಷೇಕ ನೋಡಲು ಕಾತರದಿಂದ ಕಾದಿದ್ದಾರೆ.