ಉಜಿರೆ: ಭಾನುವಾರ ರಾತ್ರಿ ಧರ್ಮಸ್ಥಳಕ್ಕೆ ಬಂದ ಯಾತ್ರಿಕರು ಊಟ, ವಸತಿ ಇಲ್ಲದೆ ಪರದಾಡಬೇಕಾಯಿತು. ಜಿಲ್ಲಾಡಳಿತದ ನಿರ್ದೇಶನದಂತೆ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಸೇವೆ ಹಾಗೂ ಪ್ರಸಾದಕ್ಕೆ ಅವಕಾಶವಿಲ್ಲ. ಊಟ, ವಸತಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.
ಜಡಿ ಮಳೆಯ ನಡುವೆ ಯಾತ್ರಿಕರು ಅಂಗಡಿ-ಮುಗ್ಗಟ್ಟುಗಳ ಎದುರು ಮಲಗಿ ರಾತ್ರಿ ಕಳೆದರು. ಕೆಲವರು ಹೊದಿಕೆ ಇಲ್ಲದೆ ಜಾಗರಣೆ ಮಾಡಿದರು. ಧರ್ಮಸ್ಥಳದಲ್ಲಿ ಮುಡಿಸೇವೆ (ತಲೆಕೂದಲು ತೆಗೆಯುವುದು)ಗೂ ಅವಕಾಶವಿಲ್ಲ. ಹಾಗಾಗಿ ಬಂದವರೆಲ್ಲ ಉಜಿರೆಗೆ ಹೋಗೆ ಸೆಲೂನ್ಗಳಲ್ಲಿ ತಲೆ ಕೂದಲು ತೆಗೆಸಿದರು. ಉಜಿರೆಯಲ್ಲಿ ಎಲ್ಲ ಹೋಟೆಲ್ಗಳ ಕೊಠಡಿಗಳೂ ಭರ್ತಿಯಾಗಿವೆ.