<p><strong>ಮಂಗಳೂರು: </strong>‘ಗೆರೆ’ ಬದುಕಿನ ವಿವಿಧ ಮಜಲುಗಳಲ್ಲಿ ನಾವು ನಮಗೆ ಹಾಕಿಕೊಳ್ಳಬೇಕಾದ ಮಿತಿ ಹಾಗೂ ವಿಸ್ತರಣೆಯನ್ನು ಸೂಕ್ಷ್ಮವಾಗಿ ತಿಳಿಸುವ ಲವಲವಿಕೆಯ ಕಾದಂಬರಿ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.</p>.<p>ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಭಾನುವಾರ ಡಾ.ನಾ.ದಾಮೋದರ ಶೆಟ್ಟಿ ಅವರ 'ಗೆರೆ' ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>'ಗೆರೆ’ ಒಂದು ಕೌಟುಂಬಿಕ ಭಾವನೆಗಳನ್ನು ಹಿಡಿದಿಟ್ಟುಕೊಂಡ, ಲವಲವಿಕೆಯ ಕಾದಂಬರಿ. ಆಧುನಿಕ ಬದುಕಿನ ಅನೇಕ ಆಸೆಗಳ ಒಂದು ಸಂಕೀರ್ಣ ಸ್ಥಿತಿ ಇಲ್ಲಿ ಬಿಂಬಿತವಾಗಿದೆ. ಆಸೆಗಳಿಗೆ ‘ಗೆರೆ’ ಹಾಕಿಕೊಳ್ಳಬೇಕು ಎನ್ನುವ ಬಹಳ ಅಪೂರ್ವವಾದ ಒಳನೋಟವನ್ನು ಕಾದಂಬರಿ ಕೊಡುತ್ತದೆ' ಎಂದು ವಿವರಿಸಿದರು.</p>.<p>'ಕುಟುಂಬಕ್ಕೆ, ಸಮುದಾಯಕ್ಕೆ ನಾವು ಹಾಕಿಕೊಳ್ಳಬೇಕಾದ ಮಿತಿಗಳು, ಗೆರೆಗಳು, ವಿಸ್ತರಣೆಗಳು ಹೇಗೆ ಎನ್ನುವುದನ್ನೂ ಕಾದಂಬರಿಯು ವಿಸ್ತರಿಸಿ ತಿಳಿಸುತ್ತದೆ' ಎಂದು ಅವರು ಹೇಳಿದರು.</p>.<p>ಡಾ.ಸತ್ಯನಾರಾಯಣ ಮಲ್ಲಿಪಟ್ಣ ಮಾತನಾಡಿ, ‘ಗೆರೆ ಹಾಕುವ ಮತ್ತು ದಾಟುವ ಮಧ್ಯೆ ಬದುಕು ನಿಂತಿದೆ. ಭಾಷೆಯಲ್ಲಿ ಮಂಗಳೂರಿನ ಸೊಗಡಿದ್ದರೂ, ಇಲ್ಲಿನ ಪಾತ್ರಗಳನ್ನು ಒಂದು ಸಮುದಾಯ, ಭೌಗೋಳಿಕ ವ್ಯಾಪ್ತಿಗೊಳಪಟ್ಟದ್ದು ಎಂದು ವಿಶ್ಲೇಷಿಸುವುದು ಕಷ್ಟ’ ಎಂದು ಅವರು ವಿಶ್ಲೇಷಿಸಿದರು.</p>.<p>‘ಹಣದ ಹಿಂದೆ ಹೋದರೆ, ಬದುಕು ಕಳೆದುಕೊಳ್ಳಬೇಕಾಗುತ್ತದೆ ಎಂಬ ಸಂದೇಶವಿದೆ. ಹೀಗಾಗಿ, ‘ಗೆರೆ’ ತನ್ನದೇ ಮಹತ್ವವನ್ನು ಪಡೆದುಕೊಳ್ಳುತ್ತದೆ. ಸ್ವತಃ ರಂಗಕರ್ಮಿಯಾಗಿರುವ ನಾ.ದಾ. ಅವರು, ಇಲ್ಲಿ ನಾಟಕೀಯ ಸನ್ನಿವೇಶವನ್ನು ಮಾರ್ಮಿಕವಾಗಿ ಪ್ರಸ್ತುತ ಪಡಿಸಿದ್ದಾರೆ. ಪ್ರಗತಿಶೀಲ ಕಾದಂಬರಿಯ ವಸ್ತುವನ್ನು ದಾಖಲಿಸಿದ್ದಾರೆ’ ಎಂದರು.</p>.<p>ಕೃತಿಕಾರ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿ, ‘ನಾವು ಬದುಕಿನಲ್ಲಿ ಮೂರ್ನಾಲ್ಕು ರೀತಿಯಲ್ಲಿ ಗೆರೆ ಹಾಕುತ್ತೇವೆ. ಈ ಪ್ರಕ್ರಿಯೆ ಎಲ್ಲರ ಬದುಕಿನಲ್ಲಿ ನಡೆದು ಹೋಗುತ್ತದೆ. ಕಾದಂಬರಿಗಾಗಿ ಭಾಷಾ ಕಸುವಿನ ಕೆಲಸವನ್ನೂ ಮಾಡಿದ್ದೇನೆ’ ಎಂದರು.</p>.<p>ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಆಲ್ವಿನ್ ಡೇಸಾ ಮಾತನಾಡಿ, ‘ಸಂಶೋಧನೆ, ವಿಮರ್ಶೆ, ವಿಶ್ಲೇಷಣೆ, ಅಭಿಪ್ರಾಯಗಳನ್ನು ಗಾಳಿಮಾತಿನ ಆಧಾರದಲ್ಲಿ ನೀಡಬೇಡಿ. ಯಾವುದೇ ಕೃತಿ ಅಥವಾ ವಿಚಾರವನ್ನು ಅರಿತು ಅಭಿವ್ಯಕ್ತಿಸಬೇಕು. ಇಂತಹ ಗೆರೆಗಳನ್ನು ಬದುಕಿನಲ್ಲಿ ಹಾಕಿಕೊಂಡರೆ, ಸಮಾಜ ಸುಧಾರಿಸುತ್ತದೆ’ ಎಂದರು.</p>.<p>ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸರಸ್ವತಿ, ವಕೀಲ–ರಂಗಕರ್ಮಿ ಶಶಿರಾಜ್ ಕಾವೂರು, ರಂಗಸಂಗಾತಿಯ ಮೈಮ್ ರಾಮದಾಸ್, ಡಾ. ವಿಶ್ವನಾಥ ಬದಿಕಾನ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>‘ಗೆರೆ’ ಬದುಕಿನ ವಿವಿಧ ಮಜಲುಗಳಲ್ಲಿ ನಾವು ನಮಗೆ ಹಾಕಿಕೊಳ್ಳಬೇಕಾದ ಮಿತಿ ಹಾಗೂ ವಿಸ್ತರಣೆಯನ್ನು ಸೂಕ್ಷ್ಮವಾಗಿ ತಿಳಿಸುವ ಲವಲವಿಕೆಯ ಕಾದಂಬರಿ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.</p>.<p>ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಭಾನುವಾರ ಡಾ.ನಾ.ದಾಮೋದರ ಶೆಟ್ಟಿ ಅವರ 'ಗೆರೆ' ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>'ಗೆರೆ’ ಒಂದು ಕೌಟುಂಬಿಕ ಭಾವನೆಗಳನ್ನು ಹಿಡಿದಿಟ್ಟುಕೊಂಡ, ಲವಲವಿಕೆಯ ಕಾದಂಬರಿ. ಆಧುನಿಕ ಬದುಕಿನ ಅನೇಕ ಆಸೆಗಳ ಒಂದು ಸಂಕೀರ್ಣ ಸ್ಥಿತಿ ಇಲ್ಲಿ ಬಿಂಬಿತವಾಗಿದೆ. ಆಸೆಗಳಿಗೆ ‘ಗೆರೆ’ ಹಾಕಿಕೊಳ್ಳಬೇಕು ಎನ್ನುವ ಬಹಳ ಅಪೂರ್ವವಾದ ಒಳನೋಟವನ್ನು ಕಾದಂಬರಿ ಕೊಡುತ್ತದೆ' ಎಂದು ವಿವರಿಸಿದರು.</p>.<p>'ಕುಟುಂಬಕ್ಕೆ, ಸಮುದಾಯಕ್ಕೆ ನಾವು ಹಾಕಿಕೊಳ್ಳಬೇಕಾದ ಮಿತಿಗಳು, ಗೆರೆಗಳು, ವಿಸ್ತರಣೆಗಳು ಹೇಗೆ ಎನ್ನುವುದನ್ನೂ ಕಾದಂಬರಿಯು ವಿಸ್ತರಿಸಿ ತಿಳಿಸುತ್ತದೆ' ಎಂದು ಅವರು ಹೇಳಿದರು.</p>.<p>ಡಾ.ಸತ್ಯನಾರಾಯಣ ಮಲ್ಲಿಪಟ್ಣ ಮಾತನಾಡಿ, ‘ಗೆರೆ ಹಾಕುವ ಮತ್ತು ದಾಟುವ ಮಧ್ಯೆ ಬದುಕು ನಿಂತಿದೆ. ಭಾಷೆಯಲ್ಲಿ ಮಂಗಳೂರಿನ ಸೊಗಡಿದ್ದರೂ, ಇಲ್ಲಿನ ಪಾತ್ರಗಳನ್ನು ಒಂದು ಸಮುದಾಯ, ಭೌಗೋಳಿಕ ವ್ಯಾಪ್ತಿಗೊಳಪಟ್ಟದ್ದು ಎಂದು ವಿಶ್ಲೇಷಿಸುವುದು ಕಷ್ಟ’ ಎಂದು ಅವರು ವಿಶ್ಲೇಷಿಸಿದರು.</p>.<p>‘ಹಣದ ಹಿಂದೆ ಹೋದರೆ, ಬದುಕು ಕಳೆದುಕೊಳ್ಳಬೇಕಾಗುತ್ತದೆ ಎಂಬ ಸಂದೇಶವಿದೆ. ಹೀಗಾಗಿ, ‘ಗೆರೆ’ ತನ್ನದೇ ಮಹತ್ವವನ್ನು ಪಡೆದುಕೊಳ್ಳುತ್ತದೆ. ಸ್ವತಃ ರಂಗಕರ್ಮಿಯಾಗಿರುವ ನಾ.ದಾ. ಅವರು, ಇಲ್ಲಿ ನಾಟಕೀಯ ಸನ್ನಿವೇಶವನ್ನು ಮಾರ್ಮಿಕವಾಗಿ ಪ್ರಸ್ತುತ ಪಡಿಸಿದ್ದಾರೆ. ಪ್ರಗತಿಶೀಲ ಕಾದಂಬರಿಯ ವಸ್ತುವನ್ನು ದಾಖಲಿಸಿದ್ದಾರೆ’ ಎಂದರು.</p>.<p>ಕೃತಿಕಾರ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿ, ‘ನಾವು ಬದುಕಿನಲ್ಲಿ ಮೂರ್ನಾಲ್ಕು ರೀತಿಯಲ್ಲಿ ಗೆರೆ ಹಾಕುತ್ತೇವೆ. ಈ ಪ್ರಕ್ರಿಯೆ ಎಲ್ಲರ ಬದುಕಿನಲ್ಲಿ ನಡೆದು ಹೋಗುತ್ತದೆ. ಕಾದಂಬರಿಗಾಗಿ ಭಾಷಾ ಕಸುವಿನ ಕೆಲಸವನ್ನೂ ಮಾಡಿದ್ದೇನೆ’ ಎಂದರು.</p>.<p>ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಆಲ್ವಿನ್ ಡೇಸಾ ಮಾತನಾಡಿ, ‘ಸಂಶೋಧನೆ, ವಿಮರ್ಶೆ, ವಿಶ್ಲೇಷಣೆ, ಅಭಿಪ್ರಾಯಗಳನ್ನು ಗಾಳಿಮಾತಿನ ಆಧಾರದಲ್ಲಿ ನೀಡಬೇಡಿ. ಯಾವುದೇ ಕೃತಿ ಅಥವಾ ವಿಚಾರವನ್ನು ಅರಿತು ಅಭಿವ್ಯಕ್ತಿಸಬೇಕು. ಇಂತಹ ಗೆರೆಗಳನ್ನು ಬದುಕಿನಲ್ಲಿ ಹಾಕಿಕೊಂಡರೆ, ಸಮಾಜ ಸುಧಾರಿಸುತ್ತದೆ’ ಎಂದರು.</p>.<p>ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸರಸ್ವತಿ, ವಕೀಲ–ರಂಗಕರ್ಮಿ ಶಶಿರಾಜ್ ಕಾವೂರು, ರಂಗಸಂಗಾತಿಯ ಮೈಮ್ ರಾಮದಾಸ್, ಡಾ. ವಿಶ್ವನಾಥ ಬದಿಕಾನ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>