<p><strong>ಬೆಳ್ತಂಗಡಿ</strong>: ತಾಲ್ಲೂಕಿನ ಕಡಿರುದ್ಯಾವರ ಗ್ರಾಮದ ಬಸವದಡ್ಡು ಶಂಕರ ಭಟ್ ಅವರ ಕೃಷಿ ತೋಟಕ್ಕೆ ಗುರುವಾರ ರಾತ್ರಿ ಒಂಟಿ ಸಲಗವೊಂದು ದಾಳಿ ಮಾಡಿ, ಕೃಷಿಗೆ ಹಾನಿ ಮಾಡಿದೆ.</p>.<p>ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡ ಕಾರಣ ಹೆಚ್ಚು ಹಾನಿಯಾಗುವುದನ್ನು ತಪ್ಪಿಸಲಾಗಿದೆ.</p>.<p>ಮುಂಡಾಜೆ ಕಾಪು ಕಡೆಯಿಂದ ಆನೆ ಬಂದಿರುವ ಸುಳಿವು ಪಡೆದ ನೆರಮನೆಯವರು, ಒಂಟಿ ಸಲಗ ತೋಟದ ಕಡೆ ನುಗ್ಗಿರುವ ಕುರಿತು ಮನೆಯವರಿಗೆ ಮಾಹಿತಿ ನೀಡಿದ್ದರು.</p>.<p>ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಸ್ಥಳೀಯರಾದ ಹರ್ಷನಾರಾಯಣ ಭಟ್, ನೀಲಯ್ಯ ಗೌಡ, ರಮೇಶ, ರಾಮಚಂದ್ರ ಮತ್ತಿತರರು 20 ಮೀ.ನಷ್ಟು ದೂರದ ತೋಟದಲ್ಲಿದ್ದ ಆನೆಯನ್ನು ದೊಂದಿ ಬೆಳಗಿಸಿ, ಪಟಾಕಿ ಸಿಡಿಸಿ ಕಾಡಿನತ್ತ ಅಟ್ಟಿದ್ದಾರೆ.</p>.<p>ಆನೆ ದಾಳಿಯಿಂದ 2 ತೆಂಗು, 25 ಬಾಳೆಗಿಡ, ಬಿದಿರು ಮೆಳೆ, ತರಕಾರಿ ಗಿಡ ಹಾಗೂ ಅನಾನಸು ಗಿಡಗಳಿಗೆ ಹಾನಿಯಾಗಿದೆ. ಉಪ ವಲಯ ಅರಣ್ಯ ಅಧಿಕಾರಿ ರವೀಂದ್ರ ಅಂಕಲಗಿ, ಅರಣ್ಯ ರಕ್ಷಕ ಶರತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು.</p>.<p>ತಮ್ಮ ಕೃಷಿ ತೋಟದ ನೀರಿನ ಉದ್ದೇಶಕ್ಕಾಗಿ ಶಂಕರ್ ಭಟ್ ನಿರ್ಮಿಸಿರುವ ತೆರೆದ ಟ್ಯಾಂಕ್ನಿಂದ ಆನೆಯು ನೀರು ಕುಡಿದು, ಬಳಿಕ ತೋಟದತ್ತ ತೆರಳಿದ ಕುರುಹು ಪತ್ತೆಯಾಗಿದೆ.</p>.<p>ಮುಂಡಾಜೆ ಚಾರ್ಮಾಡಿ, ಮಲವಂತಿಗೆ, ಮಿತ್ತಬಾಗಿಲು ಕಡಿರು ದ್ಯಾವರ ಸೇರಿದಂತೆ ಅರಣ್ಯದಂಚಿ ನಲ್ಲಿರುವ ಗ್ರಾಮಗಳಲ್ಲಿ ಅನೇಕ ಬಾರಿ ಕಾಡಾನೆಗಳು ಕಂಡುಬಂದಿವೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಮನೆ ಸಮೀಪದವರೆಗೂ ಬರುತ್ತಿರುವುದು ಈ ಭಾಗದಲ್ಲಿ ಭೀತಿ ಮೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳ್ತಂಗಡಿ</strong>: ತಾಲ್ಲೂಕಿನ ಕಡಿರುದ್ಯಾವರ ಗ್ರಾಮದ ಬಸವದಡ್ಡು ಶಂಕರ ಭಟ್ ಅವರ ಕೃಷಿ ತೋಟಕ್ಕೆ ಗುರುವಾರ ರಾತ್ರಿ ಒಂಟಿ ಸಲಗವೊಂದು ದಾಳಿ ಮಾಡಿ, ಕೃಷಿಗೆ ಹಾನಿ ಮಾಡಿದೆ.</p>.<p>ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡ ಕಾರಣ ಹೆಚ್ಚು ಹಾನಿಯಾಗುವುದನ್ನು ತಪ್ಪಿಸಲಾಗಿದೆ.</p>.<p>ಮುಂಡಾಜೆ ಕಾಪು ಕಡೆಯಿಂದ ಆನೆ ಬಂದಿರುವ ಸುಳಿವು ಪಡೆದ ನೆರಮನೆಯವರು, ಒಂಟಿ ಸಲಗ ತೋಟದ ಕಡೆ ನುಗ್ಗಿರುವ ಕುರಿತು ಮನೆಯವರಿಗೆ ಮಾಹಿತಿ ನೀಡಿದ್ದರು.</p>.<p>ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಸ್ಥಳೀಯರಾದ ಹರ್ಷನಾರಾಯಣ ಭಟ್, ನೀಲಯ್ಯ ಗೌಡ, ರಮೇಶ, ರಾಮಚಂದ್ರ ಮತ್ತಿತರರು 20 ಮೀ.ನಷ್ಟು ದೂರದ ತೋಟದಲ್ಲಿದ್ದ ಆನೆಯನ್ನು ದೊಂದಿ ಬೆಳಗಿಸಿ, ಪಟಾಕಿ ಸಿಡಿಸಿ ಕಾಡಿನತ್ತ ಅಟ್ಟಿದ್ದಾರೆ.</p>.<p>ಆನೆ ದಾಳಿಯಿಂದ 2 ತೆಂಗು, 25 ಬಾಳೆಗಿಡ, ಬಿದಿರು ಮೆಳೆ, ತರಕಾರಿ ಗಿಡ ಹಾಗೂ ಅನಾನಸು ಗಿಡಗಳಿಗೆ ಹಾನಿಯಾಗಿದೆ. ಉಪ ವಲಯ ಅರಣ್ಯ ಅಧಿಕಾರಿ ರವೀಂದ್ರ ಅಂಕಲಗಿ, ಅರಣ್ಯ ರಕ್ಷಕ ಶರತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು.</p>.<p>ತಮ್ಮ ಕೃಷಿ ತೋಟದ ನೀರಿನ ಉದ್ದೇಶಕ್ಕಾಗಿ ಶಂಕರ್ ಭಟ್ ನಿರ್ಮಿಸಿರುವ ತೆರೆದ ಟ್ಯಾಂಕ್ನಿಂದ ಆನೆಯು ನೀರು ಕುಡಿದು, ಬಳಿಕ ತೋಟದತ್ತ ತೆರಳಿದ ಕುರುಹು ಪತ್ತೆಯಾಗಿದೆ.</p>.<p>ಮುಂಡಾಜೆ ಚಾರ್ಮಾಡಿ, ಮಲವಂತಿಗೆ, ಮಿತ್ತಬಾಗಿಲು ಕಡಿರು ದ್ಯಾವರ ಸೇರಿದಂತೆ ಅರಣ್ಯದಂಚಿ ನಲ್ಲಿರುವ ಗ್ರಾಮಗಳಲ್ಲಿ ಅನೇಕ ಬಾರಿ ಕಾಡಾನೆಗಳು ಕಂಡುಬಂದಿವೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಮನೆ ಸಮೀಪದವರೆಗೂ ಬರುತ್ತಿರುವುದು ಈ ಭಾಗದಲ್ಲಿ ಭೀತಿ ಮೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>