<p><strong>ಪುತ್ತೂರು</strong>: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪ್ರದೇಶಕ್ಕೆ ನಾಲ್ಕು ದಿನಗಳಿಂದ ನಿರಂತರವಾಗಿ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡುತ್ತಿದೆ.</p>.<p>ಕೊಳ್ತಿಗೆ ಗ್ರಾಮದ ಕಟ್ಟಪುಣಿ ಭಾಗಕ್ಕೆ ಸೋಮವಾರ ರಾತ್ರಿ ದಾಳಿ ಮಾಡಿದ ಕಾಡಾನೆ ಕಿಶೋರ್ಕುಮಾರ್, ಸುಧೀರ್ ಜಿ.ಕೆ., ನಾರಾಯಣ ಗೌಡ ಅವರ ಕೃಷಿ ಹಾನಿ ಮಾಡಿದೆ. ಅಲ್ಲಿನ ಕೃಷಿಕರು ಗರ್ನಾಲ್ ಸಿಡಿಸಿದ ಬಳಿಕ ಕಾಡಾನೆ ಆ ಭಾಗದಿಂದ ತೆರಳಿದೆ. ಮಂಗಳವಾರ ಮುಂಜಾನೆ ವೇಳೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕುಮಾರ್ ಪೆರ್ನಾಜೆ ಅವರ ಕೃಷಿ ದಾಳಿ ಮಾಡಿ ಬಾಳೆ ಮತ್ತು ಅಡಿಕೆ ಕೃಷಿ ಧ್ವಂಸಗೊಳಿಸಿದೆ.</p>.<p>ಮೂರು ವರ್ಷಗಳಿಂದ ಕಾಡಾನೆ ಕೃಷಿ ಹಾನಿ ಮಾಡುತ್ತಿದೆ. ಪೆರ್ನಾಜೆ ವ್ಯಾಪ್ತಿಯ ಅರಣ್ಯ ಪ್ರದೇಶ ಭಾಗದಲ್ಲಿ ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿರುವ ಸೋಲಾರ್ ಬೇಲಿಯೂ ನಿಷ್ಪ್ರಯೋಜಕವಾಗಿದೆ. ಕಾಡಾನೆಗಳನ್ನು ಸ್ಥಳಾಂತರಿಸದೆ ಇದ್ದರೆ ಮುಂದೆ ಜೀವಕ್ಕೂ ಅಪಾಯವಾಗುವ ಸಂಭವ ಇದೆ ಎಂದು ಕೃಷಿಕರು ಆತಂತ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪ್ರದೇಶಕ್ಕೆ ನಾಲ್ಕು ದಿನಗಳಿಂದ ನಿರಂತರವಾಗಿ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡುತ್ತಿದೆ.</p>.<p>ಕೊಳ್ತಿಗೆ ಗ್ರಾಮದ ಕಟ್ಟಪುಣಿ ಭಾಗಕ್ಕೆ ಸೋಮವಾರ ರಾತ್ರಿ ದಾಳಿ ಮಾಡಿದ ಕಾಡಾನೆ ಕಿಶೋರ್ಕುಮಾರ್, ಸುಧೀರ್ ಜಿ.ಕೆ., ನಾರಾಯಣ ಗೌಡ ಅವರ ಕೃಷಿ ಹಾನಿ ಮಾಡಿದೆ. ಅಲ್ಲಿನ ಕೃಷಿಕರು ಗರ್ನಾಲ್ ಸಿಡಿಸಿದ ಬಳಿಕ ಕಾಡಾನೆ ಆ ಭಾಗದಿಂದ ತೆರಳಿದೆ. ಮಂಗಳವಾರ ಮುಂಜಾನೆ ವೇಳೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕುಮಾರ್ ಪೆರ್ನಾಜೆ ಅವರ ಕೃಷಿ ದಾಳಿ ಮಾಡಿ ಬಾಳೆ ಮತ್ತು ಅಡಿಕೆ ಕೃಷಿ ಧ್ವಂಸಗೊಳಿಸಿದೆ.</p>.<p>ಮೂರು ವರ್ಷಗಳಿಂದ ಕಾಡಾನೆ ಕೃಷಿ ಹಾನಿ ಮಾಡುತ್ತಿದೆ. ಪೆರ್ನಾಜೆ ವ್ಯಾಪ್ತಿಯ ಅರಣ್ಯ ಪ್ರದೇಶ ಭಾಗದಲ್ಲಿ ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿರುವ ಸೋಲಾರ್ ಬೇಲಿಯೂ ನಿಷ್ಪ್ರಯೋಜಕವಾಗಿದೆ. ಕಾಡಾನೆಗಳನ್ನು ಸ್ಥಳಾಂತರಿಸದೆ ಇದ್ದರೆ ಮುಂದೆ ಜೀವಕ್ಕೂ ಅಪಾಯವಾಗುವ ಸಂಭವ ಇದೆ ಎಂದು ಕೃಷಿಕರು ಆತಂತ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>