ಬ್ಯಾಂಕ್ ಅಧ್ಯಕ್ಷ ಬೆಳ್ಳೂರು ನಾಟೆಕಲ್ಲಿನ ಸೂಫಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಸುಮಾರು ₹ 4.75 ಕೋಟಿ ವಂಚನೆಯನ್ನು ಪತ್ತೆಹಚ್ಚಲಾಗಿದೆ. ರತೀಶ್ ಅವರು ಸಿಪಿಎಂ ಮುಳ್ಳೇರಿಯ ವಲಯ ಸಮಿತಿಯ ಸದಸ್ಯರಾಗಿದ್ದು, ಕರ್ಮಂತೋಡಿಯ ನಿವಾಸಿಯಾಗಿದ್ದಾರೆ. ಸೊಸೈಟಿಯ ಸದಸ್ಯರ ಹೆಸರಲ್ಲಿ, ಅವರಿಗೆ ತಿಳಿಯದಂತೆ ಸುಮಾರು ₹ 7 ಲಕ್ಷದ ವರೆಗೆ ಪ್ರತಿ ಸದಸ್ಯರ ಹೆಸರಿನಲ್ಲಿ ಸಾಲ ತೆಗೆದುಕೊಂಡಿದ್ದು, ಮಾರ್ಚ್ ತಿಂಗಳಲ್ಲಿ ವಾರ್ಷಿಕ ಲೆಕ್ಕ ಪರಿಶೋಧಕರು ಬಂದಾಗ, ಈ ಅವ್ಯವಹಾರ ನಡೆದಿರುವುದು ಗೊತ್ತಾಗಿದೆ. ಒಂದು ತಿಂಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ರತೀಶ್ ತಿಳಿಸಿದ್ದರು ಎನ್ನಲಾಗಿದೆ.