‘ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ, ವ್ಯವಹಾರದಲ್ಲಿ ನಡೆಯುತ್ತಿರುವ ಸ್ಪರ್ಧೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುವುದಿಲ್ಲ. ಟ್ರಾಲ್ ಬೋಟ್ಗಳ ಮಾಲೀಕರಿಗೂ ಪರ್ಸಿನ್ ಬೋಟ್ಗಳ ಮಾಲೀಕರಿಗೂ ವಿಭಿನ್ನ ಸಮಸ್ಯೆಗಳು ಇವೆ. ತಮಿಳುನಾಡು ಮತ್ತು ಕೇರಳ ಭಾಗಕ್ಕೆ ಹೋದರೆ ದೋಣಿ ಒಡೆದು ಹಾಕುವುದು ಸೇರಿದಂತೆ ನಾನಾ ರೀತಿಯ ತೊಂದರೆ ಕೊಡುತ್ತಾರೆ ಎಂಬುದನ್ನು ನಿರ್ದೇಶಕರ ಗಮನಕ್ಕೆ ತರಲಾಗಿದೆ. ಮೀನುಗಾರಿಕೆಗೆ ನಡೆಯುವ ಪ್ರದೇಶಗಳನ್ನು ವಿವಿಧ ವಲಯಗಳನ್ನಾಗಿ ಮಾಡುವುದಕ್ಕಿಂತ ಪೂರ್ವ ಮತ್ತು ಪಶ್ಚಿಮ ಎಂಬ ಎರಡೇ ವಲಯಗಳನ್ನು ಮಾಡುವಂತೆಯೂ ಕೋರಲಾಗಿದೆ. ಸದ್ಯ ಯಾವುದೂ ಅಂತಿಮ ಆಗಲಿಲ್ಲ. ಆದ್ದರಿಂದ ಸರ್ಕಾರದ ನಡೆಗಾಗಿ ಕಾದುನೋಡಬೇಕಿದೆ’ ಎಂದು ಅವರು ತಿಳಿಸಿದರು.