<p>ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ₹ 6.4 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಸೈಕಲ್ ಟ್ರ್ಯಾಕ್ಗೆ ಸಂಸದ ನಳಿನ್ಕುಮಾರ್ ಕಟೀಲ್ ಅವರು ಮಾರ್ನಮಿಕಟ್ಟೆಯಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಸೈಕಲಿಂಗ್ ಆಸಕ್ತರು ಹೆಚ್ಚುತ್ತಿದ್ದಾರೆ. ಈ ಕಾರಣ ಜನರ ಬೇಡಿಕೆಯಂತೆ ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲಾಗುವುದು. 12 ಕಿ.ಮೀ. ಉದ್ದದ ಈ ಮಾರ್ಗವು ಶಾಸಕ ಡಿ. ವೇದವ್ಯಾಸ ಕಾಮತ್ ಮುತುವರ್ಜಿಯಲ್ಲಿ ನಿರ್ಮಾಣಗೊಳ್ಳುತ್ತಿದೆ’ ಎಂದರು.</p>.<p>ಸೈಕಲ್ ಪಥ ಮಂಗಳೂರಿಗೆ ಹೊಸ ಯೋಜನೆ ಮತ್ತು ಪರಿಕಲ್ಪನೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಜನರ ಬಳಕೆಗೆ ಲಭ್ಯವಾಗಬೇಕು ಎಂದರು.</p>.<p>ಉದ್ದೇಶಿತ ಸೈಕಲ್ ಪಥವು ಶೇ 30ರಷ್ಟು ಶಿಕ್ಷಣ ಸಂಸ್ಥೆಗಳ ಮೂಲಕ ಹಾದುಹೋಗುತ್ತದೆ. ಬೋಳಾರದಿಂದ ಪ್ರಾರಂಭವಾಗುವ ಸೈಕಲ್ ಪಥವು ವೆಲೆನ್ಸಿಯಾ ಮತ್ತು ಮಾರ್ನಮಿಕಟ್ಟೆ ಮೂಲಕ ಕೊಡಿಯಾಲ್ಬೈಲ್ನ ಟಿಎಂಎ ಪೈ ಸಭಾಂಗಣ ಬಳಿ ಕೊನೆಗೊಳ್ಳಲಿದೆ. ಮಂಗಳೂರಿನ ಬೈಸಿಕಲ್ ಕ್ಲಬ್ಗಳ ಒತ್ತಾಸೆಯಂತೆ ಮೊದಲ ಹಂತದಲ್ಲಿ ಈ ಯೋಜನೆ ಸಾಕಾರಗೊಳ್ಳುತ್ತಿದೆ. 2030ರ ವೇಳೆಗೆ ಮಂಗಳೂರನ್ನು ಸೈಕಲ್ಸ್ನೇಹಿ ನಗರವನ್ನಾಗಿ ರೂಪಿಸಲು<br />ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದರು.</p>.<p>ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮಹಾನಗರ ಪಾಲಿಕೆಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಇದ್ದರು.</p>.<p>***</p>.<p>26 ಶಿಕ್ಷಣ ಸಂಸ್ಥೆಗಳು, 20 ಸಾರ್ವಜನಿಕ ಕಟ್ಟಡ ಸನಿಹದಿಂದ ಸೈಕಲ್ ಪಥ ನಿರ್ಮಾಣಗೊಳ್ಳುತ್ತದೆ. ಮಕ್ಕಳು ಮತ್ತು ವೃದ್ಧರಿಗೆ ಇದು ಅನುಕೂಲವಾಗಲಿದೆ.</p>.<p><em><strong>- ನಳಿನ್ಕುಮಾರ್ ಕಟೀಲ್, ಸಂಸದ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ₹ 6.4 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಸೈಕಲ್ ಟ್ರ್ಯಾಕ್ಗೆ ಸಂಸದ ನಳಿನ್ಕುಮಾರ್ ಕಟೀಲ್ ಅವರು ಮಾರ್ನಮಿಕಟ್ಟೆಯಲ್ಲಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಸೈಕಲಿಂಗ್ ಆಸಕ್ತರು ಹೆಚ್ಚುತ್ತಿದ್ದಾರೆ. ಈ ಕಾರಣ ಜನರ ಬೇಡಿಕೆಯಂತೆ ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲಾಗುವುದು. 12 ಕಿ.ಮೀ. ಉದ್ದದ ಈ ಮಾರ್ಗವು ಶಾಸಕ ಡಿ. ವೇದವ್ಯಾಸ ಕಾಮತ್ ಮುತುವರ್ಜಿಯಲ್ಲಿ ನಿರ್ಮಾಣಗೊಳ್ಳುತ್ತಿದೆ’ ಎಂದರು.</p>.<p>ಸೈಕಲ್ ಪಥ ಮಂಗಳೂರಿಗೆ ಹೊಸ ಯೋಜನೆ ಮತ್ತು ಪರಿಕಲ್ಪನೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಜನರ ಬಳಕೆಗೆ ಲಭ್ಯವಾಗಬೇಕು ಎಂದರು.</p>.<p>ಉದ್ದೇಶಿತ ಸೈಕಲ್ ಪಥವು ಶೇ 30ರಷ್ಟು ಶಿಕ್ಷಣ ಸಂಸ್ಥೆಗಳ ಮೂಲಕ ಹಾದುಹೋಗುತ್ತದೆ. ಬೋಳಾರದಿಂದ ಪ್ರಾರಂಭವಾಗುವ ಸೈಕಲ್ ಪಥವು ವೆಲೆನ್ಸಿಯಾ ಮತ್ತು ಮಾರ್ನಮಿಕಟ್ಟೆ ಮೂಲಕ ಕೊಡಿಯಾಲ್ಬೈಲ್ನ ಟಿಎಂಎ ಪೈ ಸಭಾಂಗಣ ಬಳಿ ಕೊನೆಗೊಳ್ಳಲಿದೆ. ಮಂಗಳೂರಿನ ಬೈಸಿಕಲ್ ಕ್ಲಬ್ಗಳ ಒತ್ತಾಸೆಯಂತೆ ಮೊದಲ ಹಂತದಲ್ಲಿ ಈ ಯೋಜನೆ ಸಾಕಾರಗೊಳ್ಳುತ್ತಿದೆ. 2030ರ ವೇಳೆಗೆ ಮಂಗಳೂರನ್ನು ಸೈಕಲ್ಸ್ನೇಹಿ ನಗರವನ್ನಾಗಿ ರೂಪಿಸಲು<br />ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದರು.</p>.<p>ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮಹಾನಗರ ಪಾಲಿಕೆಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಇದ್ದರು.</p>.<p>***</p>.<p>26 ಶಿಕ್ಷಣ ಸಂಸ್ಥೆಗಳು, 20 ಸಾರ್ವಜನಿಕ ಕಟ್ಟಡ ಸನಿಹದಿಂದ ಸೈಕಲ್ ಪಥ ನಿರ್ಮಾಣಗೊಳ್ಳುತ್ತದೆ. ಮಕ್ಕಳು ಮತ್ತು ವೃದ್ಧರಿಗೆ ಇದು ಅನುಕೂಲವಾಗಲಿದೆ.</p>.<p><em><strong>- ನಳಿನ್ಕುಮಾರ್ ಕಟೀಲ್, ಸಂಸದ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>