<p><strong>ಬದಿಯಡ್ಕ: </strong>ಕಾಸರಗೋಡು ಜಿಲ್ಲಾ ಕಸ್ಟಮ್ಸ್ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 15.5 ಕೆ.ಜಿ. ಚಿನ್ನವನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ.</p>.<p>ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಾಂಗ್ಲಿಯ ಕಡಪಾಡಿ ನಿವಾಸಿ ಖೇತನ್ (29) ಹಾಗೂ ಆಕಾಶ್ (23) ಎಂಬುವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.</p>.<p>ಕಣ್ಣೂರಿನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಬಗ್ಗೆ ಗುಪ್ತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾಸರಗೋಡು ಕಸ್ಟಮ್ಸ್ ನಿಯಂತ್ರಣ ಘಟಕದ ಅಧಿಕಾರಿ ಪಿ.ಪಿ.ರಾಜೀವನ್ ನೇತೃತ್ವದಲ್ಲಿ ಹವಾಲ್ದಾರ್ ಕೆ. ಆನಂದ ಹಾಗೂ ಕೆ. ಚಂದ್ರಶೇಖರ ಕಾರ್ಯಾಚರಣೆ ನಡೆಸಿದರು.</p>.<p>ಕಾರು ಹಾಗೂ ಚಿನ್ನವನ್ನು ಪಿಲಿಕುಂಜೆಯ ಕಸ್ಟಮ್ಸ್ ಕಚೇರಿಗೆ ಸಾಗಿಸಲಾಗಿದೆ. ಕಾರಿನ ಎದುರುಗಡೆಯ ಇನ್ನೊಂದು ಆಸನದ ಅಡಿಭಾಗದಲ್ಲಿ ಗುಪ್ತವಾಗಿ ನಿರ್ಮಿಸಿದ ಪೆಟ್ಟಿಗೆಯೊಳಗೆ ಚಿನ್ನಾಭರಣವನ್ನು ಇಡಲಾಗಿತ್ತು. ಕಲ್ಲಿಕೋಟೆಯ ಕಸ್ಟಮ್ಸ್ ಸಹಾಯಕ ಆಯುಕ್ತ ವಿಕಾಸ್ ಅವರು ಬುಧವಾರ ಕಾಸರಗೋಡಿಗೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬದಿಯಡ್ಕ: </strong>ಕಾಸರಗೋಡು ಜಿಲ್ಲಾ ಕಸ್ಟಮ್ಸ್ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 15.5 ಕೆ.ಜಿ. ಚಿನ್ನವನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ.</p>.<p>ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಾಂಗ್ಲಿಯ ಕಡಪಾಡಿ ನಿವಾಸಿ ಖೇತನ್ (29) ಹಾಗೂ ಆಕಾಶ್ (23) ಎಂಬುವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.</p>.<p>ಕಣ್ಣೂರಿನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಬಗ್ಗೆ ಗುಪ್ತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾಸರಗೋಡು ಕಸ್ಟಮ್ಸ್ ನಿಯಂತ್ರಣ ಘಟಕದ ಅಧಿಕಾರಿ ಪಿ.ಪಿ.ರಾಜೀವನ್ ನೇತೃತ್ವದಲ್ಲಿ ಹವಾಲ್ದಾರ್ ಕೆ. ಆನಂದ ಹಾಗೂ ಕೆ. ಚಂದ್ರಶೇಖರ ಕಾರ್ಯಾಚರಣೆ ನಡೆಸಿದರು.</p>.<p>ಕಾರು ಹಾಗೂ ಚಿನ್ನವನ್ನು ಪಿಲಿಕುಂಜೆಯ ಕಸ್ಟಮ್ಸ್ ಕಚೇರಿಗೆ ಸಾಗಿಸಲಾಗಿದೆ. ಕಾರಿನ ಎದುರುಗಡೆಯ ಇನ್ನೊಂದು ಆಸನದ ಅಡಿಭಾಗದಲ್ಲಿ ಗುಪ್ತವಾಗಿ ನಿರ್ಮಿಸಿದ ಪೆಟ್ಟಿಗೆಯೊಳಗೆ ಚಿನ್ನಾಭರಣವನ್ನು ಇಡಲಾಗಿತ್ತು. ಕಲ್ಲಿಕೋಟೆಯ ಕಸ್ಟಮ್ಸ್ ಸಹಾಯಕ ಆಯುಕ್ತ ವಿಕಾಸ್ ಅವರು ಬುಧವಾರ ಕಾಸರಗೋಡಿಗೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>