<p><strong>ಕಡಬ (ಉಪ್ಪಿನಂಗಡಿ)</strong>: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ₹265.20 ಕೋಟಿ ವ್ಯವಹಾರ ನಡೆಸಿದ್ದು, ₹ 1.37 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 12.5 ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಘೋಷಿಸಿದರು.</p>.<p>ಮಂಗಳವಾರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಸಂಘವು ₹15.03 ಕೋಟಿ ಠೇವಣಿ ಹೊಂದಿದ್ದು, ₹5.86 ಕೋಟಿ ಪಾಲು ಬಂಡವಾಳ ಹೊಂದಿದೆ. ಸದಸ್ಯರಿಗೆ ₹ 49.69 ಕೋಟಿ ಸಾಲ ವಿತರಿಸಿದ್ದು, ₹ 47.02 ಕೋಟಿ ಸಾಲ ಹೊರ ಬಾಕಿ ಇದೆ. ವರ್ಷಾಂತ್ಯಕ್ಕೆ ಶೇ 95.60 ಸಾಲ ಮರು ಪಾವತಿಯಾಗಿದೆ. ಕೇವಲ 2 ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿರುವ ಸಂಘವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಕಳೆದ 5 ವರ್ಷಗಳಿಂದ ಒಂದು ಕೋಟಿಗಿಂತಲೂ ಮಿಕ್ಕಿ ಲಾಭ ಗಳಿಸಿರುವುದು ಸಂಘದ ಅದ್ಬುತ ಸಾಧನೆಯಾಗಿದೆ ಎಂದು ಹೇಳಿದರು.</p>.<p>ಸದಸ್ಯ ಧನಂಜಯ ಕೊಡಂಗೆ ಮಾತನಾಡಿ, ಬಲ್ಯದಲ್ಲಿ ಸಂಘದ ಕಚೇರಿಗೆ ಜಾಗ ಖರೀದಿ ಮಾಡಿ ಸುಸಜ್ಜಿತ ಕಚೇರಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಬಲ್ಯದಲ್ಲಿ ಜಾಗ ಹುಡುಕುತ್ತಿದ್ದೇವೆ. ಶೀಘ್ರವಾಗಿ ಈ ಕೆಲಸ ಮಾಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.</p>.<p>ಸಭೆಯ ನೋಟಿಸ್ ಸಂಘದ ಪ್ರತಿಯೊಬ್ಬ ಸದಸ್ಯರಿಗೆ ತಲುಪುವ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆದು ಈ ಸಮಸ್ಯೆಯನ್ನು ಮುಂದಿನ ಬಾರಿಗೆ ಸಮರ್ಪಕವಾಗಿ ಮಾಡುವುದಾಗಿ ಸಭೆಗೆ ತಿಳಿಸಲಾಯಿತು. ಸದಸ್ಯರಾದ ಪುಲಸ್ತ್ಯ ರೈ, ರಘುನಾಥ ಹೆಬ್ಬಾರ್, ಕಿರಣ್ ಗೋಗಟೆ, ಚಿದಾನಂದ ಕೊಯಕ್ಕುರಿ ಸಲಹೆಗಳನ್ನು ನೀಡಿದರು.</p>.<p><strong>ಸನ್ಮಾನ:</strong> ಸಂಘದಲ್ಲಿ 37 ವರ್ಷಗಳ ಕಾಲ ದುಡಿದ ಮೋನಪ್ಪ ಪೂಜಾರಿ ಕೆರ್ಪಡೆಯನ್ನು ಸನ್ಮಾನಿಸಲಾಯಿತು. ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.</p>.<p>ನಿರ್ದೇಶಕರಾದ ಜಯಚಂದ್ರ ರೈ, ಶಶಾಂಕ ಗೋಖಲೆ ಎಂ., ಶಿವಪ್ರಸಾದ್ ಪಿ.ವಿ., ಶ್ರೀಧರ ಎಸ್.ಎನ್., ಶಿವಪ್ರಸಾದ್ ರೈ, ಅಚ್ಯುತ ದೇರಾಜೆ, ಪಕೀರ, ಯೋಗೇಂದ್ರ ಕುಮಾರ್ ಬಿ.ಎಸ್., ಲೀಲಾವತಿ ಕೆ., ಶಕಿಲ ಹಾಜರಿದ್ದರು. ಸಂಘದ ಉಪಾಧ್ಯಕ್ಷ ಚಿದಾನಂದ ವಂದಿಸಿದರು. ತೋಮಸ್ ಪಿ.ಎಂ.ನಿರೂಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡಬ (ಉಪ್ಪಿನಂಗಡಿ)</strong>: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ₹265.20 ಕೋಟಿ ವ್ಯವಹಾರ ನಡೆಸಿದ್ದು, ₹ 1.37 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 12.5 ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಘೋಷಿಸಿದರು.</p>.<p>ಮಂಗಳವಾರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಸಂಘವು ₹15.03 ಕೋಟಿ ಠೇವಣಿ ಹೊಂದಿದ್ದು, ₹5.86 ಕೋಟಿ ಪಾಲು ಬಂಡವಾಳ ಹೊಂದಿದೆ. ಸದಸ್ಯರಿಗೆ ₹ 49.69 ಕೋಟಿ ಸಾಲ ವಿತರಿಸಿದ್ದು, ₹ 47.02 ಕೋಟಿ ಸಾಲ ಹೊರ ಬಾಕಿ ಇದೆ. ವರ್ಷಾಂತ್ಯಕ್ಕೆ ಶೇ 95.60 ಸಾಲ ಮರು ಪಾವತಿಯಾಗಿದೆ. ಕೇವಲ 2 ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿರುವ ಸಂಘವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಕಳೆದ 5 ವರ್ಷಗಳಿಂದ ಒಂದು ಕೋಟಿಗಿಂತಲೂ ಮಿಕ್ಕಿ ಲಾಭ ಗಳಿಸಿರುವುದು ಸಂಘದ ಅದ್ಬುತ ಸಾಧನೆಯಾಗಿದೆ ಎಂದು ಹೇಳಿದರು.</p>.<p>ಸದಸ್ಯ ಧನಂಜಯ ಕೊಡಂಗೆ ಮಾತನಾಡಿ, ಬಲ್ಯದಲ್ಲಿ ಸಂಘದ ಕಚೇರಿಗೆ ಜಾಗ ಖರೀದಿ ಮಾಡಿ ಸುಸಜ್ಜಿತ ಕಚೇರಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಬಲ್ಯದಲ್ಲಿ ಜಾಗ ಹುಡುಕುತ್ತಿದ್ದೇವೆ. ಶೀಘ್ರವಾಗಿ ಈ ಕೆಲಸ ಮಾಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.</p>.<p>ಸಭೆಯ ನೋಟಿಸ್ ಸಂಘದ ಪ್ರತಿಯೊಬ್ಬ ಸದಸ್ಯರಿಗೆ ತಲುಪುವ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆದು ಈ ಸಮಸ್ಯೆಯನ್ನು ಮುಂದಿನ ಬಾರಿಗೆ ಸಮರ್ಪಕವಾಗಿ ಮಾಡುವುದಾಗಿ ಸಭೆಗೆ ತಿಳಿಸಲಾಯಿತು. ಸದಸ್ಯರಾದ ಪುಲಸ್ತ್ಯ ರೈ, ರಘುನಾಥ ಹೆಬ್ಬಾರ್, ಕಿರಣ್ ಗೋಗಟೆ, ಚಿದಾನಂದ ಕೊಯಕ್ಕುರಿ ಸಲಹೆಗಳನ್ನು ನೀಡಿದರು.</p>.<p><strong>ಸನ್ಮಾನ:</strong> ಸಂಘದಲ್ಲಿ 37 ವರ್ಷಗಳ ಕಾಲ ದುಡಿದ ಮೋನಪ್ಪ ಪೂಜಾರಿ ಕೆರ್ಪಡೆಯನ್ನು ಸನ್ಮಾನಿಸಲಾಯಿತು. ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.</p>.<p>ನಿರ್ದೇಶಕರಾದ ಜಯಚಂದ್ರ ರೈ, ಶಶಾಂಕ ಗೋಖಲೆ ಎಂ., ಶಿವಪ್ರಸಾದ್ ಪಿ.ವಿ., ಶ್ರೀಧರ ಎಸ್.ಎನ್., ಶಿವಪ್ರಸಾದ್ ರೈ, ಅಚ್ಯುತ ದೇರಾಜೆ, ಪಕೀರ, ಯೋಗೇಂದ್ರ ಕುಮಾರ್ ಬಿ.ಎಸ್., ಲೀಲಾವತಿ ಕೆ., ಶಕಿಲ ಹಾಜರಿದ್ದರು. ಸಂಘದ ಉಪಾಧ್ಯಕ್ಷ ಚಿದಾನಂದ ವಂದಿಸಿದರು. ತೋಮಸ್ ಪಿ.ಎಂ.ನಿರೂಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>