ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಡಿ ಪರೀಕ್ಷೆ ಮತ್ತು ಪಂಚಕರ್ಮದಲ್ಲಿ ಪರಿಣತಿ ಹೊಂದಿರುವ, ನಾಡಿ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನು ನಡೆಸಿರುವ ಸಂಜಯ್ ಕುಮಾರ್ ಪಿ. ಚಾನೆಡ್ ಅವರು ಬೆಳಿಗ್ಗೆ 9ರಿಂದ 5 ಗಂಟೆವರೆಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಜ.21 ರಂದು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.