ಮಂಗಳೂರು: ಪತ್ರಕರ್ತ ಮನೋಹರ ಪ್ರಸಾದ್ (65) ಶುಕ್ರವಾರ ನಿಧನರಾದರು.
ಕಾರ್ಕಳ ತಾಲ್ಲೂಕು ಕರ್ವಾಲು ಗ್ರಾಮದವರಾದ ಅವರು ‘ನವ ಭಾರತ’ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿ, ನಂತರ ‘ಉದಯವಾಣಿ’ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ ನಂತರ ಬ್ಯುರೊ ಮುಖ್ಯಸ್ಥರಾಗಿ, ಸಹಾಯಕ ಸಂಪಾದಕರಾಗಿ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.
ಬರಹಗಾರರಾಗಿ, ಉತ್ತಮ ಕಾರ್ಯಕ್ರಮ ನಿರೂಪಕರಾಗಿ ಹೆಸರು ಗಳಿಸಿದ್ದರು.