ಮುಡಿಪು: ಕನ್ನಡ ಭಾಷೆಯ ಮೇಲೆಕನಕದಾಸರಿಗಿದ್ದ ಪ್ರೀತಿ ಅತ್ಯದ್ಭುತ. ಅವರು ಕಾವ್ಯಗಳಲ್ಲಿ ಉರ್ದು, ಪಾರ್ಸಿ ಹಿಂದಿ ಸೇರಿದಂತೆ ಅನೇಕ ಭಾಷೆಗಳ ಪದಗಳನ್ನು ಬಳಸಿದ್ದಾರೆ. ಸಂಸ್ಕೃತದ ಪದಗಳನ್ನೂ ಕನ್ನಡೀಕರಣಗೊಳಿಸುವ ಪ್ರಯತ್ನಗಳನ್ನೂ ಅವರ ಕಾವ್ಯಗಳಲ್ಲಿ ಕಾಣಬಹುದು. ಹೊಸ ಪದಗಳನ್ನು ಸೃಷ್ಟಿಸಿರುವುದು ಕಾವ್ಯ ಭಾಷೆಯ ಅದ್ಭುತಕ್ಕೆ ಸಾಕ್ಷಿ ಎಂದು ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ ಅಭಿಪ್ರಾಯಪಟ್ಟರು.